ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬಸವ ವೇದಿಕೆ' ವತಿಯಿಂದ ಬಸವ ಜಯಂತಿ, ಬಸವಶ್ರೀ ಮತ್ತು ವಚನ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಬೆಂಗಳೂರು, ಏಪ್ರಿಲ್ 27, 2026 ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬಸವ ವೇದಿಕೆ' ವತಿಯಿಂದ ಬಸವ ಜಯಂತಿ, ಬಸವಶ್ರೀ ಮತ್ತು ವಚನ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. 'ಸಮಾಜದಲ್ಲಿ ವಚನ ಗಳನ್ನು ಅಳವಡಿಕೊಳ್ಳುವುದನ್ನು ಕಡ್ಡಾಯಗೊಳಿಸಬೇಕು. ಇದಕ್ಕೆ ಕಾನೂನಿನ ಬಲ ಬೇಕು' ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಹೇಳಿದರು. 'ವಚನ, ಭಗವದ್ಗೀತೆ, ಉಪನಿಷತ್ ಗಳಿಗೆ ಕಾನೂನಿನ ಬಲ ದೊರೆತು, ಅಳವಡಿಕೆ ಕಡ್ಡಾಯವಾದರೆ ಸಮಾಜ ದಲ್ಲಿ ಬದಲಾವಣೆ ಆಗಲು ಸಾಧ್ಯ. ಎಲ್ಲರೂ ಒಪ್ಪಿರುವಂತಹದ್ದನ್ನು ಮಾತ್ರ ಕಡ್ಡಾಯಮಾಡಬೇಕು' ಎಂದರು. 'ಬಸವಣ್ಣನವರ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ಉನ್ನತ ಸ್ಥಾನದಲ್ಲಿರುವ ಎಲ್ಲರೂ ಮಾತನಾಡು ತ್ತಾರೆ. ಅವುಗಳನ್ನು ಬೇರೆಯವರು ಅಳವಡಿಸಿಕೊಳ್ಳಬೇಕು ಎಂದು ಬಯಸು ತಾರೆಯೇ ಹೊರತು, ತಾವು ಅದನ್ನು ಅಳವಡಿಸಿಕೊಳ್ಳುವುದಿಲ್ಲ. ಸಮಾಜದಲ್ಲಿ ಕಡ್ಡಾಯಗೊಳಿಸದ ಹೊರತು ಯಾವುದನ್ನೂ ಅಳವಡಿಸಿಕೊಳ್ಳುವು-ದಿಲ್ಲ. ಹೀಗಾಗಿ, ಅದಕ್ಕೆ ಕಾನೂನು ಬಲ ಅಗತ್ಯ' ಎಂದು ಅಭಿಪ್ರಾಯಪಟ್ಟರು. 'ಗುರುರಾಜ ಕರಜಗಿ ಅವರು ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಜನರನ್ನು ಜಾಗೃತಗೊಳಿಸುತ್ತಿದ್ದಾರೆ ಎಂದು ಹೇಳಿದರು. 'ಇಂದು ಎಲ್ಲ ಕ್ಷೇತ್ರಗಳಲ್ಲೂ ಅಧಃಪತನ ಕಾಣುತ್ತಿದ್ದೇವೆ. ವ್ಯವಸ್ಥೆಯ ಕೆಡಕಿನ ಬಗ್ಗೆ ವಿವೇಕಶಾಲಿಗಳು ಸಿನಿಕರಾಗುತ್ತಿದ್ದಾರೆ. ಜನಪರ ...