Posts

ಮಾಜಿ ಸಚಿವರಾದ ಜಮೀರ್ ಅಹ್ಮದ್ ಖಾನ್ ರವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಜಿ.ಮದಿಯರಸನ್ ಒತ್ತಾಯ

Image
ಬೆಂಗಳೂರು: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರ ಮಂತ್ರಿಮಂಡಲದಲ್ಲಿ ಬಿ ಝಡ್ ಜಮೀರ್ ಅಹ್ಮದ್ ಖಾನ್ ರವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕುಬೆಂದು ಕೇಂದ್ರದ ಮತ್ತು ರಾಜ್ಯದ ಕಾಂಗ್ರೆಸ್ ವರಿಷ್ಠ ನಾಯಕರಿಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ (ರಿ) (ಸಂಯೋಜಕ) ಬೆಂಗಳೂರು ನಗರಾಧ್ಯಕ್ಷ ಜಿ.ಮದಿಯರಸನ್ ಒತ್ತಾಯಿಸಿದರು. ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಮೀರ್ ಅಹ್ಮದ್ ಖಾನ್ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ವಸತಿ, ವಕ್ಸ್, ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾಗಿ ಬಡವರ ಕಲ್ಯಾಣಕ್ಕಾಗಿ ಉತ್ತಮ ಕೆಲಸ ಮಾಡಿದ್ದಾರೆ. ಜೊತೆಗೆ ರಾಜ್ಯದ ಎಲ್ಲಾ ಜಾತಿಯ ಬಡವರಿಗೆ ಲಕ್ಷಾಂತರ ಮನೆಗಳನ್ನು ಸರ್ಕಾರದಿಂದ ನಿರ್ಮಿಸಿಕೊಟ್ಟಿದ್ದಾರೆ.  ಬೆಳಗಾವಿ ಜಿಲ್ಲೆಯ ರಾಯಭಾಗ ಮತ್ತು ಕಾಗವಾಡ ತಾಲ್ಲೂಕಿನ ಗ್ರಾಮಗಳಲ್ಲಿ ಅನೇಕ ವರ್ಷಗಳಿಂದ ವಾಸಿಸುತ್ತಿರುವ ನೆರೆಸಂತ್ರಸ್ಥರಿಗೆ ಮನೆಗಳನ್ನು ಕಟ್ಟಿಕೊಡುವ ಕಾರ್ಯವನ್ನು ಮುಂದುವರೆಸಿದ್ದಾರೆ. ಇಂಥಹ ಜನಪ್ರಿಯ ನಾಯಕರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು. ಈ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಮತ್ತು ಮುಖ್ಯಮಂತ್ರಿ ಡಿ ಕೆ ಶಿವಕುಮರ್ ರವರಿ ಮನವಿ ಸಲ್ಲಿಸಲಾಗುವುದು. ಒಂದು ವೇಳೆ ಬಿ ಝಡ್ ಜಮೀ ಅಹ್ಮದ್ ಖಾನ್ ರವರಿಗೆ ಉಪಮುಖ್ಯಮಂತ್ರಿ ಸ್ಥಾನ ನ...

ಅಪೋಲೋ ಕ್ಯಾನ್ಸರ್ ಸೆಂಟರ್ಸ್ ಗಾರ್ಡಿಯನ್ ಹೆಲ್ತ್ ನ ಶೀಲ್ಡ್ ಮಲ್ಟಿ-ಕ್ಯಾನ್ಸರ್ ಡಿಟೆಕ್ಷನ್ ಪರೀಕ್ಷೆಯನ್ನು ಭಾರತದಲ್ಲಿ ಮೊದಲ ಬಾರಿಗೆ ತರುತ್ತಿರುವ ಸಂಸ್ಥೆಯಾಗಿದೆ.

Image
ಅಪೋಲೋ ಕ್ಯಾನ್ಸರ್ ಸೆಂಟರ್ಸ್ ಗಾರ್ಡಿಯನ್ ಹೆಲ್ತ್ ನ ಶೀಲ್ಡ್ ಮಲ್ಟಿ-ಕ್ಯಾನ್ಸರ್ ಡಿಟೆಕ್ಷನ್ ಪರೀಕ್ಷೆಯನ್ನು ಭಾರತದಲ್ಲಿ ಮೊದಲ ಬಾರಿಗೆ ತರುತ್ತಿರುವ ಸಂಸ್ಥೆಯಾಗಿದೆ. - ಜೈಡಸ್ ಲೈಫ್ ಸೈನ್ಸಸ್‍ ಜೊತೆಯಲ್ಲಿ ಈ ರಕ್ತ-ಆಧರಿತ ಕ್ಯಾನ್ಸರ್ ಪರೀಕ್ಷೆಯನ್ನು ದೇಶದಲ್ಲಿ ವಿಸ್ತರಿಸಲು ಒಡಂಬಡಿಕೆಗೆ ಸಹಿ  ಚೆನ್ನೈ, ಜುಲೈ 3, 2026: ಕ್ಯಾನ್ಸರ್‌ನಿಂದ ಬದುಕುಳಿಯುವ ಸಾಧ್ಯತೆಯನ್ನು ಹಾಗೂ ರೋಗಿಗಳ ಜೀವನದ ಗುಣಮಟ್ಟವನ್ನು ಉತ್ತಮಪಡಿಸುವಲ್ಲಿ ಆರಂಭಿಕ ಹಂತದಲ್ಲೇ ರೋಗ ಪತ್ತೆ ಹಚ್ಚುವುದು ಅತ್ಯಂತ ಪ್ರಬಲವಾದ ಮಾರ್ಗವಾಗಿದೆ. ಈ ನಿಟ್ಟಿನಲ್ಲಿ, ಭಾರತದ ಪ್ರಮುಖ ಮತ್ತು ಸಮಗ್ರ ಕ್ಯಾನ್ಸರ್ ಆರೈಕೆ ಸೇವೆ ಒದಗಿಸುವ ಸಂಸ್ಥೆಯಾದ ಅಪೊಲೊ ಕ್ಯಾನ್ಸರ್ ಸೆಂಟರ್ಸ್, ನಿಖರ ಆಂಕಾಲಜಿ ಕಂಪನಿಯಾದ ಗಾರ್ಡಂಟ್ ಹೆಲ್ತ್ (ನಾಸ್ಡಾಕ್ ಜಿ.ಎಚ್) ಅಭಿವೃದ್ಧಿಪಡಿಸಿರುವ ಶೀಲ್ಡ್™️ ಮಲ್ಟಿ-ಕ್ಯಾನ್ಸರ್ ಡಿಟೆಕ್ಷನ್(ಎಂಸಿಡಿ) ಪ್ರಯೋಗಾಲಯ ಪರೀಕ್ಷೆಯನ್ನು ಭಾರತದಲ್ಲಿ ಪರಿಚಯಿಸಲು ಜೈಡಸ್ ಲೈಫ್‌ಸೈನ್ಸಸ್ ಸಂಸ್ಥೆಯೊಂದಿಗೆ ಇಂದು ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದೆ. ಈ ಬಿಡುಗಡೆಯೊಂದಿಗೆ, ಭಾರತದಲ್ಲಿ ಈ ತಪಾಸಣಾ ಪರೀಕ್ಷೆಯನ್ನು ಒದಗಿಸುತ್ತಿರುವ ಮೊದಲ ಆರೋಗ್ಯ ಸಂಸ್ಥೆ ಎಂಬ ಹೆಗ್ಗಳಿಕೆಗೆ ಎಸಿಸಿಗಳು ಪಾತ್ರವಾಗಿವೆ.  ಭಾರತದ ಕ್ಯಾನ್ಸರ್ ಹೊರೆಯು 2040ರ ವೇಳೆಗೆ 2.08 ಮಿಲಿಯನ್ ಪ್ರಕರಣಗಳಿಗೆ ಹೆಚ್ಚಾಗುವ ನಿರೀಕ್ಷೆ ಇದ್ದು 2020 ರಿಂದ ಶೇ.57.5ರಷ್ಟು...

India's Got Talent Fame Vicky Krish Brings International Magic Show to Bengaluru

Image
Bengaluru, July 2, 2026 Vicky Krish of India's Got Talent fame is coming to Bangalore to give a wonderful experience of the magic world Famous magician Vicky Krish of India's Got Talent fame witnessed an amazing magic show at Bangalore Press Club today. In the presence of journalists, photographers and media representatives, Vicky Krupp surprised everyone by giving some unique and surprising magic shows of her international level. . Regarded as one of India's leading magicians, Vicky Krish is renowned across the country for skillfully combining magic, mind reading, psychology, comedy and grand illusions to deliver a unique entertainment experience. With more than a decade of professional experience, he has been greatly appreciated in India and abroad for his innovative and engaging performances. Vicky Krish, who was a finalist of India's Got Talent, is also an artist who has gained billions of views on social networks. His popular talent for turning ordinary...

ಶಾಸಕ ಪ್ರದೀಪ್ ಈಶ್ವ‌ರ್ ಮೇಲೆ ಚಪ್ಪಲಿ ಎಸೆತ ಪ್ರಕರಣ : ಕಾನೂನು ಕ್ರಮ ಕೈಗೊಳ್ಳಲು ಕೆ.ಎಂ.ರಾಮಚಂದ್ರಪ್ಪ ಅಗ್ರಹ

Image
ಬೆಂಗಳೂರು, ಜುಲೈ 1, 2026 ಇತ್ತೀಚಿಗೆ ಚಿಕ್ಕಬಳ್ಳಾಪುರದಲ್ಲಿ ಕೆಂಪೇಗೌಡ ಜಯಂತಿ ಆಚರಣೆ ವೇಳೆ ಶಾಸಕ ಪ್ರದೀಪ್ ಈಶ್ವ‌ರ್ ಮೇಲೆ ಚಪ್ಪಲಿ ಎಸೆದು, ಅವಾಚ್ಯ ಶಬ್ದಗಳಿಂದ ನಿಂದಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು' ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ.ರಾಮಚಂದ್ರಪ್ಪ ಒತ್ತಾಯಿಸಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 'ಪೊಲೀಸರ ಸಮ್ಮುಖದಲ್ಲೇ ಆಡಳಿತ ಪಕ್ಷದ ಶಾಸಕರಿಗೆ ಅವಮಾನಿಸಿರುವುದನ್ನು ಒಕ್ಕೂಟ ಖಂಡಿಸುತ್ತದೆ. ಶೋಷಿತ ಸಮುದಾಯಕ್ಕೆ ಸೇರಿದ ಜನ ಪ್ರತಿನಿಧಿಯ ಮೇಲೆ ದೌರ್ಜನ್ಯ ನಡೆದಿರುವಾಗ ಧ್ವನಿ ಇಲ್ಲದ ಜನರ ಪರಿಸ್ಥಿತಿ ಏನು' ಎಂದು ಪ್ರಶ್ನಿಸಿದರು. 'ರಾಜ್ಯದ ಯಾವುದೇ ಮೂಲೆಯಲ್ಲಿ ಹಿಂದುಳಿದವರ ಮೇಲೆ ದಬ್ಬಾಳಿಕೆ ನಡೆದರೆ ಒಕ್ಕೂಟವು ತೀವ್ರ ಹೋರಾಟ ನಡೆಸಲಿದೆ. ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕ್ಷಮೆಯಾಚಿಸಬೇಕು' ಎಂದು ಒತ್ತಾಯಿಸಿದರು.    ಸುದ್ದಿಗೋಷ್ಠಿಯಲ್ಲಿ ಮಾವಳ್ಳಿ ಶಂಕ‌ರ್, ಕೆ.ವೆಂಕಟಸುಬ್ಬರಾಜು, ಬಸವರಾಜ ಲ. ಬಸಲಿಗುಂದಿ, ಜಿ.ಡಿ.ಗೋಪಾಲ್‌, ಬಾಲಕೃಷಸ್ವಾಮಿ ಯಾದವ್‌, ರಂಗಪ್ಪ, ಮಹಾಂತೇಶ್‌ ಎಸ್. ಕೌಲಗಿ, ಬಿ.ಟಿ.ಜಗದೀಶ್, ಬಸವರಾಜ ಮಾಳಗೆ ಪಾಲ್ಗೊಂಡಿದ್ದರು.

ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ ಅಸೋಸಿಯೇಷನ್' ನಿಂದ ಪತ್ರಿಕಾಗೋಷ್ಠಿ

Image
ಸರ್ಕಾರದ ರಾಜಧನ ಪಾವತಿ ಅವ್ಯವಸ್ಥೆ - ಗಣಿಗುತ್ತಿಗೆದಾರರಿಗೆ ಸಂಕಷ್ಟ ಬಗ್ಗೆ ಪತ್ರಿಕಾಗೋಷ್ಠಿ  ಸರ್ಕಾರದ ಬೊಕ್ಕಸಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ರಾಜಧನ ಸಂಗ್ರಹಣೆ ವ್ಯವಸ್ಥೆ ಜಾರಿಯಲ್ಲಿದೆ. ಇದನ್ನು ಕಟ್ಟುನಿಟ್ಟಾಗಿ ಅನುಷ್ಟಾನಗೊಳಿಸದೇ ಸರ್ಕಾರಕ್ಕೆ ದಿನಃಪ್ರತೀ ಕೋಟ್ಯಾಂತರ ರೂ. ನಷ್ಟವಾಗುತ್ತಿದೆ. ಮಾತ್ರವಲ್ಲದೇ ಗಣಿಗುತ್ತಿಗೆದಾರರಿಗೂ ಗಣಿಗಾರಿಕೆ ನಡೆಸಲು ಕಷ್ಟವಾಗುತ್ತಿದೆ. ಶ್ರೀ ಅರುಣ್ ಕುಮಾರ್ ಉಪಾಧ್ಯಕ್ಷರು ಶ್ರೀ ಪುರುಷೋತ್ತಮ ಪ್ರಧಾನ ಕಾರ್ಯದರ್ಶಿ ಶ್ರೀ ಎನ್ ಮಂಜುನಾಥ್ ಹಿಂದಿನ ಸರ್ಕಾರದ ಅವಧಿಯಲ್ಲಿ ವಿಧಾನಸಭೆಯ ಸಾರ್ವಜನಿಕ ಲೆಕ್ಕ-ಪತ್ರಗಳ ಸಮಿತಿಯ ಅಧ್ಯಕ್ಷರಾಗಿದ್ದ ಶ್ರೀ ಕೃಷ್ಣ ಬೈರೇಗೌಡರ ಅಧ್ಯಕ್ಷತೆಯ ಸಾರ್ವಜನಿಕ ಲೆಕ್ಕ-ಪತ್ರಗಳ ಸಮಿತಿಯು ಕೇವಲ ಕಟ್ಟಡಕಲ್ಲು ಗಣಿ ಉದ್ಯಮದಿಂದಲೇ ವರ್ಷಕ್ಕೆ ಸುಮಾರು ರೂ. 18,000-20,000 ಕೋಟಿಯಷ್ಟು ನಷ್ಟವಾಗುತ್ತಿದೆ ಎಂದು ವರದಿಯನ್ನು ನೀಡಿರುತ್ತಾರೆ. ಮಾತ್ರವಲ್ಲದೇ Report of the Comptroller and Auditor General of India on Revenue Sector-2017 ವರದಿಯಲ್ಲಿಯೂ ಕೂಡಾ ಸರ್ಕಾರಕ್ಕೆ ನಷ್ಟವಾಗುತ್ತಿರುವ ಬಗ್ಗೆ ಪದೇ ಪದೇ ಉಲ್ಲೇಖಿಸಿರುತ್ತಾರೆ. ಸಂಘಟನಾ ಕಾರ್ಯದರ್ಶಿ ಈ ಬಗ್ಗೆ ನಮ್ಮ ಮನವಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವರು ದಿನಾಂಕ: 12.10.2023 ರಂದು ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳ ಸಭೆ ಕರೆದು ಗಣಿಗುತ್ತಿಗೆದಾರರಿಂದಲೇ ರಾ...

ಬೆಂಗಳೂರಿನ ಅಪೋಲೋ ಆಸ್ಪತ್ರೆಯು ಪಾರ್ಶ್ವವಾಯು ಮತ್ತು ಎದೆನೋವು ಆರೈಕೆಗೆ ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ನಿಂದ ಎರಡು ಪ್ರಮಾಣೀಕರಣ ಪಡೆದ ಮೊದಲ ಸಂಸ್ಥೆಯಾಗಿದೆ.

Image
ಬೆಂಗಳೂರು, ಜೂನ್ 30, 2026 ಬೆಂಗಳೂರಿನ ಅಪೋಲೋ ಆಸ್ಪತ್ರೆಯು ಅಮೆರಿಕನ್ ಹಾರ್ಟ್ ಅಸೋಸಿಯೇಷನ್®️ (ಎ.ಎಚ್.ಎ) ನಿಂದ ಸಮಗ್ರ ಪಾರ್ಶ್ವವಾಯು ಕೇಂದ್ರ ಮತ್ತು ಸಮಗ್ರ ಎದೆನೋವು ಕೇಂದ್ರದ ಪ್ರಮಾಣೀಕರಣಗಳನ್ನು ಪಡೆದ ಭಾರತದ ಮೊದಲ ಆಸ್ಪತ್ರೆ ಎನಿಸಿದ್ದು ಇದು ಎರಡು ಅತ್ಯಂತ ಸಮಯ ಸೂಕ್ಷ್ಮತೆಯ ವೈದ್ಯಕೀಯ ಪರಿಸ್ಥಿತಿಗಳ ನಿರ್ವಹಣೆಯಲ್ಲಿ ತುರ್ತು ಆರೈಕೆಯಲ್ಲಿ ಮಹತ್ತರ ಮೈಲಿಗಲ್ಲಾಗಿಸಿದೆ.  ಭಾರತದಲ್ಲಿ ಸಾವು ಸಂಭವಿಸಲು ಪಾರ್ಶ್ವವಾಯು ನಾಲ್ಕನೇ ಪ್ರಮುಖ ಕಾರಣವಾಗಿದ್ದು, ಅಂಗವೈಕಲ್ಯಕ್ಕೆ ಐದನೇ ಪ್ರಮುಖ ಕಾರಣವಾಗಿದೆ. ಹಾಗೆಯೇ, 30 ರಿಂದ 69 ವರ್ಷದೊಳಗಿನ ವಯಸ್ಕರಲ್ಲಿ ಸಂಭವಿಸುವ ಒಟ್ಟು ಸಾವುಗಳಲ್ಲಿ ಸುಮಾರು 36% ರಷ್ಟು ಸಾವುಗಳು ಹೃದಯ ಸಂಬಂಧಿ ಕಾಯಿಲೆಗಳಿಂದಲೇ ಸಂಭವಿಸುತ್ತವೆ. ಈ ಆರೋಗ್ಯ ಸಮಸ್ಯೆಗಳ ಹೊರೆ ದಿನೇದಿನೇ ಹೆಚ್ಚಾಗುತ್ತಿರುವುದರಿಂದ, ಆಸ್ಪತ್ರೆಗಳ ಸನ್ನದ್ಧತೆಯನ್ನು ಸುಧಾರಿಸುವುದು ಹಾಗೂ ರೋಗಿಗಳಿಗೆ ರೋಗನಿರ್ಣಯ ಮತ್ತು ಚಿಕಿತ್ಸೆ ನೀಡಲು ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡುವುದು, ರೋಗಿಗಳ ಬದುಕುಳಿಯುವಿಕೆ ಮತ್ತು ಚೇತರಿಕೆಯ ಪ್ರಮಾಣವನ್ನು ಉತ್ತಮಗೊಳಿಸುವಲ್ಲಿ ಅತ್ಯಂತ ನಿರ್ಣಾಯಕವಾಗಿದೆ.    ಕರ್ನಾಟಕದಲ್ಲಿ ಸುಮಾರು 5,00,000 ಜನರು ಪಾರ್ಶ್ವವಾಯು ಸಮಸ್ಯೆಯೊಂದಿಗೆ ಬದುಕುತ್ತಿದ್ದಾರೆ ಎಂದು ಅಂದಾಜಿಸಲಾಗಿದ್ದು, ಇದು ರಾಜ್ಯದ ಆರೋಗ್ಯ ರಕ್ಷಣಾ ವ್ಯವಸ್ಥೆಯ ಮೇಲೆ ಗಮನಾರ್ಹ ...

'ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನ' ವತಿಯಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಆಯೋಜನೆ

Image
ಬೆಂಗಳೂರು, ಜೂನ್ 27, 2026 ಬೆಂಗಳೂರಿನ ಜ್ಯಾನಜ್ಯೋತಿ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಯೋಜಿಸಲಾಗಿತ್ತು.  'ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ನೀರಿನ ವಿವಾದ ಹಲವು ವರ್ಷಗಳಿಂದ ಇದೆ. ಜೋಡಣೆಯೇ ಇದಕ್ಕೆ ನದಿಗಳ ಪರಿಹಾರವಾಗಿದ್ದು, ಗೋದಾವರಿ ಮತ್ತು ಕಾವೇರಿ ನದಿ ಜೋಡಣೆ ಯೋಜನೆಯು ಕಾರ್ಯಗತವಾಗಬೇಕು' ಎಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅಭಿಪ್ರಾಯಪಟ್ಟರು. 'ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನ' ಶನಿವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 'ನೀರಿನ ಕೊರತೆಯಿಂದ ಕರ್ನಾಟಕ ಹಾಗೂ ತಮಿಳುನಾಡಿನ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ನನಗೆ ಅರಿವಿದೆ. ಹಿಂದೆ ತಮಿಳುನಾಡಿನ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷನಾಗಿದ್ದಾಗ, ನದಿ ಜೋಡಣೆಯ ಮಹತ್ವ ಸಾರಲು ತಮಿಳುನಾಡಿನಾದ್ಯಂತ 93 ದಿನಗಳ ಐತಿಹಾಸಿಕ ರಥಯಾತ್ರೆ ನಡೆಸಿದೆ. ದೇಶದ ಎಲ್ಲ ನದಿಗಳು ಒಂದಕ್ಕೊಂದು ಜೋಡಣೆಯಾಗಿ, ನೀರು ಸದುಪಯೋಗವಾಬೇಕು. ನದಿ ಜೋಡಣೆಗೆ ರಾಜಕೀಯ ಇಚ್ಛಾಶಕ್ತಿ ಕೊರತೆ ದೊಡ್ಡ ಸವಾಲಾಗಿದೆ' ಎಂದು ಹೇಳಿದರು. 'ನದಿಗಳ ಜೋಡಣೆ ಕೇವಲ ಒಂದು ರಾತ್ರಿಯಲ್ಲಿ ಆಗುವ ಕೆಲಸವಲ್ಲ. ಸಣ್ಣ ಸಣ್ಣ ಕಾರ್ಯಕ್ರಮಗಳ ಮೂಲಕ ಸಾಕಾರವಾಗಲಿದೆ. ಲಭ್ಯವಿರುವ ನದಿ ನೀರನ್ನು ರೈತರ ಹಿತದೃಷ್ಟಿಯಿಂದ ಸಮಾನವಾಗಿ ಹಾಗೂ ನ್ಯಾಯಯುತವಾಗಿ ಹಂಚಿಕೆ ಮಾಡಬೇಕು. ಇದು ಮಾತ್ರ ನೀರಿನ ...