Posts

Showing posts from April, 2025

ಕೆ.ಪಿ.ಜೆ.ಪಿ ಪಕ್ಷದಿಂದ ನೂತನ ರಾಜ್ಯ ಯುವಜನ ಅಧ್ಯಕ್ಷರ ಮತ್ತು ರಾಜ್ಯ ಮಹಿಳಾ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ನಡೆಯಿತು.

Image
ಬೆಂಗಳೂರು, ಏಪ್ರಿಲ್ 29, 2025 ಬೆಂಗಳೂರು ಪ್ರೆಸ್ ಕ್ಲನ್ ನಲ್ಲಿ 'ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ' ದ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.  ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷರಾದ ಮಹೇಶ್ ಗೌಡ ಅವರು ಮಾತನಾಡಿದರು.   ಕೆ.ಪಿ.ಜೆ.ಪಿ ಪಕ್ಷದಿಂದ ನೂತನ ರಾಜ್ಯ ಯುವಜನ ಅಧ್ಯಕ್ಷರ ಮತ್ತು ರಾಜ್ಯ ಮಹಿಳಾ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ನಡೆಯಿತು.   ನಮ್ಮ ರಾಜಕೀಯ ಪಕ್ಷ ಕೆಪಿಜೆಪಿ ಯಲ್ಲಿ ಬೂತ್ ಮಟ್ಟದಿಂದ ಬಲಿಷ್ಟ ಸಂಘಟನೆ ಸ್ಥಾಪನೆ ಮಾಡಲು ಮುಂದಾಗಿರುವ ಸಂದರ್ಭದಲ್ಲಿ ರಾಜ್ಯದ ಕೆಲವು ಪ್ರಮುಖ ಸ್ಥಾನಗಳಾದ ರಾಜ್ಯ ಯುವ ಅಧ್ಯಕ್ಷ ಮತ್ತು ರಾಜ್ಯ ಮಹಿಳಾ ಅಧ್ಯಕ್ಷ ಪದವಿಯನ್ನು ಆಯ್ಕೆ ಮಾಡುವ ಮೂಲಕ ರಾಜ್ಯದಲ್ಲಿ ಸಂಚಲನ ಮೂಡಿಸುವ ಪ್ರಯತ್ನವನ್ನು ಕೆಪಿಜೆಪಿ ಪಕ್ಷವು ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ತಂತ್ರಜ್ಞಾನಗಳನ್ನು ಬಳಸಿಕೊಂಡು ಯುವ ಜನರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ಕಾನೂನು ಭದ್ರತೆ, ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯ ಹಾಗೂ ಸವಲತ್ತುಗಳನ್ನು ಒದಗಿಸಲು ಕೆಪಿಜೆಪಿ ಪಕ್ಷವು ಕಂಕಣ ಬದ್ಧವಾಗಿರುತ್ತದೆ.

ಬೆಂಗಳೂರಿನ ಕೆ.ಜಿ.ಎಸ್ ಕ್ಲಬ್ ನಲ್ಲಿ "ಕರ್ನಾಟಕ ಸ್ಟೇಟ್ ಕ್ಲಾಸಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ - 2025" ನಡೆಯಿತು.

Image
ಬೆಂಗಳೂರು, ಏಪ್ರಿಲ್ 28, 2025 ಬೆಂಗಳೂರಿನ ಕೆ.ಜಿ.ಎಸ್ ಕ್ಲಬ್ ನಲ್ಲಿ "ಕರ್ನಾಟಕ ಸ್ಟೇಟ್ ಕ್ಲಾಸಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ - 2025" ನಡೆಯಿತು.  ಏಪ್ರಿಲ್ 26ರಿಂದ ಏಪ್ರಿಲ್ 28ರವಗೆ ನಡೆದ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಪುರುಷ ಹಾಗೂ ಮಹಿಳಾ ವೆಯಿಟ್ ಲಿಫ್ಟಿರ್ ಗಳು ಭಾಗಿಯಾಗಿದ್ದರು.  ಸಬ್ ಜೂನಿಯರ್, ಜೂನಿಯರ್ ಹಾಗೂ ಮಾಸ್ಟರ್ಸ್ ವಿಭಾಗಗಳಲ್ಲಿ ವೆಯಿಟ್ ಲಿಫ್ಟಿಂಗ್ ಸ್ಪರ್ಧೆಗಳು ನಡೆದವು.  ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ 350ಕ್ಕೂ ಹೆಚ್ಚು ಪುರುಷ ಹಾಗೂ ಮಹಿಳಾ ಸ್ಪರ್ಧೆಗಳು ಭಾಗಿಯಾಗಿದ್ದರು. ಮೂರನೇ ದಿನವಾದ ಏಪ್ರಿಲ್ 28ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಮುಖ ಅತಿಥಿಯಾಗಿ ಗೌರಿ ವೆಂಚರ್ಸ್ ನ ಮುಖ್ಯಸ್ಥರಾದ ದೀಪಕ್ ಗೌಡ ಅವರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ನಡೆದ ವಿವಿಧ ವಿಭಾಗಗಳ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ, ಪ್ರಮಾಣಪತ್ರಗಳನ್ನು ವಿತರಣೆ ಮಾಡಲಾಯಿತು. ಈ ಚಾಂಪಿಯನ್ ಶಿಪ್ ಅಧ್ಯಕ್ಷರಾದ ಮಠಪತಿ ಮಹಾದೇವಯ್ಯ, ಕಾರ್ಯದರ್ಶಿ ಎನ್. ಸುಬ್ರಮಣ್ಯ ಅವರ ನೇತೃತ್ವದಲ್ಲಿ ನಡೆಯಿತು.

ಬಿಬಿಎಂಪಿಯಲ್ಲಿ ಪೌರಕಾರ್ಮಿಕರನ್ನು ಖಾಯಂಗೊಳಿಸುತ್ತಿರುವ ಪ್ರಕ್ರಿಯೆಯನ್ನು ಲೋಕಾಯುಕ್ತದಲ್ಲಿರುವ ಪ್ರಕರಣವು ಮುಕ್ತಾಯವಾಗುವರೆಗೂ ತಡೆಹಿಡಿಯಬೇಕೆಂದು ಕೆ.ಜಿ. ಶ್ರೀನಿವಾಸ್ ಅವರು ಒತ್ತಾಯಿಸಿದರು.

Image
ಬೆಂಗಳೂರು, ಏಪ್ರಿಲ್ 28, 2025 ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಅಖಿಲ ಭಾರತ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಕಾರ್ಮಿಕ ಕಲ್ಯಾಣ ಸಂಘಗಳ ಮತ್ತು ಇತರರ ಒಕ್ಕೂಟ' ದ ಅಧ್ಯಕ್ಷರಾದ ಕೆ.ಜಿ. ಶ್ರೀನಿವಾಸ್ ಅವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.  ಬಿಬಿಎಂಪಿಯಲ್ಲಿ ಪೌರಕಾರ್ಮಿಕರನ್ನು ಖಾಯಂಗೊಳಿಸುತ್ತಿರುವ ಪ್ರಕ್ರಿಯೆಯನ್ನು ಲೋಕಾಯುಕ್ತದಲ್ಲಿರುವ ಪ್ರಕರಣವು ಮುಕ್ತಾಯವಾಗುವರೆಗೂ ತಡೆಹಿಡಿಯಬೇಕೆಂದು ಕೆ.ಜಿ. ಶ್ರೀನಿವಾಸ್ ಅವರು ಒತ್ತಾಯಿಸಿದರು.  ಉಲ್ಲೇಖ: 1 ) ಎ.ಸಿ.ಬಿ/ಬೆಂ.ನರಾ/ಮೊ.ಸಂಖ್ಯೆ. 40/2017 2) 22204/25(&)/4/441/2024-25 20: 29-08-2024 3) ಅನಧಿಕೃತ ಗೈರು ಹಾಜರಾಗಿರುವ ಮತ್ತು 1 ವರ್ಷದ ಒಳಗಿನ ಸೇವೆ ಸಲ್ಲಿಸುತ್ತಿರುವ ನೇರ ಪಾವತಿ ಪೌರ ಕಾರ್ಮಿಕರನ್ನು ಸಹ ಖಾಯಂ ಪ್ರಕ್ರಿಯೆಯಲ್ಲಿ ಪರಿಗಣಿಸುವ ಬಗ್ಗೆ. ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಈ ಮೂಲಕ ತಮ್ಮ ಆದ್ಯ ಗಮನಕ್ಕೆ ತರಬಯಸುವುದೇನೆಂದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 2005 ರಿಂದ 2017ರ ವರೆಗೂ ಗುತ್ತಿಗೆದಾರರ ಅಡಿಯಲ್ಲಿ ಕಾರ್ಯನಿರ್ವಹಿಸಿದ ಪೌರ ಕಾರ್ಮಿಕರ ಇ.ಎಸ್.ಐ. ಮತ್ತು ಪಿ.ಎಫ್. ಹಣದ ಮೊತ್ತ ರೂ.384 ಕೋಟಿ ಮತ್ತು 6.600 ಜನ ನಕಲಿ ಪೌರ ಕಾರ್ಮಿಕರ ವೇತನ 55ಂ ಕೋಟಗಳ ವಂಚನೆಯ ಕುರಿತು ಭ್ರಷ್ಟಾಚಾರ ನಿರ್ಮೂಲನ ಕಾಯಿದೆಯಡಿಯಲ್ಲಿ ಮೇಲ್ಕಂಡ ಉಲ್ಲೇಖ (1) ರಂತೆ ಪ್ರಕರಣವು ...

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮೇ 24 ರಂದು "ಸಂವಿಧಾನ ಜಾಗೃತಿ ಸಮಾವೇಶ" ನಡೆಯಲಿದೆ.

Image
ಬೆಂಗಳೂರು, ಏಪ್ರಿಲ್ 28, 2025  ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕರ್ನಾಟಕ ಆದಿಜಾಂಬವ/ಮಾದಿಗ/ಪೌರಕಾರ್ಮಿಕ ಸಂಘಟನೆಗಳ ಒಕ್ಕೂಟ'ದ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.  ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮೇ 24 ರಂದು "ಸಂವಿಧಾನ ಜಾಗೃತಿ ಸಮಾವೇಶ" ನಡೆಯಲಿದೆ ಎಂದು ತಿಳಿಸಿದರು.  ಒಳ ಮೀಸಲಾತಿ ಸಂಬಂಧ ನಡೆಯುತ್ತಿರುವ ಸಮೀಕ್ಷೆಯಲ್ಲಿ ಮಾದಿಗ ಸಮುದಾಯದ ಜನರು ಸಕ್ರಿಯವಾಗಿ ಭಾಗಿಯಾಗಬೇಕೆಂದು ಮನವಿ ಮಾಡಿದರು.  ಕರ್ನಾಟಕ ಆದಿಜಾಂಬವ/ಮಾದಿಗ/ಪೌರಕಾರ್ಮಿಕ ಸಂಘಟನೆಗಳ ಒಕ್ಕೂಟವು ರಾಜ್ಯದಲ್ಲಿ ಸಕ್ರಿಯವಾಗಿ ಕಾರ್ಯ-ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಆದಿಜಾಂಬವ ಸಂಘ, ಮಾದಿಗ ಮೀಸಲಾತಿ ಹೋರಾಟ ಸಮಿತಿ, ಮಾದಿಗ ದಂಡೋರ, ಜಗಜೀವನರಾಂ ಸಂಘ, ಮಾತಂಗ ಪರಿವಾರ, ಮಾತಂಗ ಫೌಂಡೇಷನ್, ಮಾದಿಗರ ಸಂಘ, ಮಾದಿಗ ಮಹಾಸಭಾ, ಆದಿಜಾಂಬವ ಮಹಾಸಭಾ, ಡೋಹರ ಕಕ್ಕಯ್ಯ ಸಮಾಜ, ರಾಜ್ಯ ಸಮಗಾರ ಹರಳಯ್ಯ ಸಮಾಜ, ಪೌರಕಾರ್ಮಿಕರ ಸಂಘ ಹಾಗೂ ವಿವಿಧ ಸಂಘಗಳನ್ನೊಳಗೊಂಡ ಒಕ್ಕೂಟವಾಗಿದ್ದು, ರಾಜ್ಯದಲ್ಲಿನ ಪರಿಶಿಷ್ಟ ಜಾತಿಯ ಮಾದಿಗ ಸಮುದಾಯದ ಏಳಿಗೆ ಮತ್ತು ಅಭಿವೃದ್ಧಿಗಾಗಿ ಸಾಮೂಹಿಕ ನಾಯಕತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಆಸ್ಪಷ್ಟ ಸಮುದಾಯಕ್ಕೆ ಸೇರಿದ. ಮಾದಿಗ, ಮಾದಾರ, ಮಾತಂಗ, ಚಮ್ಮಾರ, ಸಮಗಾರ, ಚಮಗಾರ, ಮಣೆಗಾರ, ಮೋಚಿ, ಮಚಿಗಾರ್,ಥೋರ್, ಕಕ್ಕಯ್ಯ, ಹರಳಯ್ಯ, ಅರುಂಧತೀಯ. ಬಿಕ್ಕಲು ವಕ್ಕಲಿಗ, ದ...