Posts

Showing posts from January, 2026

ಬೆಳವಾಲ್ ಫೌಂಡೇಶನ್ ನಿಂದ 'ಒಂದು ಕೋಟಿ ಮರ ನೆಡುವ ಅಭಿಯಾನ'ವು ಫೆಬ್ರವರಿ 1 ರಿಂದ - ಜೂನ್ 5 ರವರೆಗೆ ನಡೆಯಲಿದೆ.

Image
ಬೆಳವಾಲ್ ಫೌಂಡೇಶನ್ ನಿಂದ 'ಒಂದು ಕೋಟಿ ಮರ ನೆಡುವ ಅಭಿಯಾನ'ವು ಫೆಬ್ರವರಿ 1 ರಿಂದ - ಜೂನ್ 5 ರವರೆಗೆ ನಡೆಯಲಿದೆ.  ಪ್ರತಿ ವ್ಯಕ್ತಿ ಒಂದು ಮರ ನೆಡಲು ಮನವಿ ತಾಯಿ ಭೂಮಿಯನ್ನು ಮತ್ತು ಪರಿಸರವನ್ನು ಉಳಿಸಿ. ಆರೋಗ್ಯಕರ ಜೀವನಕ್ಕೆ ಹಾಗೂ ಶುದ್ಧ ಗಾಳಿಗೆ ನಮ್ಮ ಹಕ್ಕನ್ನು ಕಾಪಾಡೋಣ 2024ರ ಮಾರ್ಚ್ ವರದಿ ಪ್ರಕಾರ, ಕರ್ನಾಟಕದಲ್ಲಿ ಈಗಾಗಲೇ *86,308 ಹೆಕ್ಟೇರ್ ಕಾಡು ಪ್ರದೇಶ ಅಕ್ರಮವಾಗಿ ಅತಿಕ್ರಮಣವಾಗಿದೆ* ಇಂದು 'ಮರ ನೆಡುವುದು ಅತ್ಯಂತ ಅಗತ್ಯವಾಗಿದೆ. ಭೂಮಿ ಸಹಾಯಕ್ಕಾಗಿ ಅಳುತ್ತಿದೆ. ಮರಗಳು ಅದರ ಮೌನ ರಕ್ಷಕರು. ಒಂದು ಕಾಲದಲ್ಲಿ ಹಸಿರು ಕಾಡುಗಳಿಂದ ತುಂಬಿದ್ದ ನಮ್ಮ ಭೂಮಿ, ಇಂದು ಅರಣ್ಯ ನಾಶ ಮತ್ತು ಮಾಲಿನ್ಯದ ಕಾರಣ ಉಸಿರಾಡಲು ಕಷ್ಟಪಡುತ್ತಿದೆ. ಪ್ರತಿ ಮರ ಕಡಿದಾಗ, ನಾವು ಅಪಾಯಕರ ಭವಿಷ್ಯದತ್ತ ಒಂದು ಹೆಜ್ಜೆ ಇಡುತ್ತಿದ್ದೇವೆ. ಹೆಚ್ಚುತ್ತಿರುವ ಬಿಸಿಲು, ಮಾಲಿನ್ಯಗೊಂಡ ಗಾಳಿ. ಒಣಗುತ್ತಿರುವ ನದಿಗಳು ಮತ್ತು ಅನಿಶ್ಚಿತ ಹವಾಮಾನ ಇವು ಪ್ರಕೃತಿಯ ನೋವಿನ ಸಂಕೇತಗಳು, ಮರಗಳು ಕೇವಲ ಸಸ್ಯಗಳಲ್ಲ, ಅವು *ಜೀವದಾತರು*. ಅವು ನಮಗೆ ಉಸಿರಾಡಲು ಆಮ್ಲಜನಕ, ನೆರಳಿಗಾಗಿ ಛಾಯೆ, ಆಹಾರಕ್ಕಾಗಿ ಹಣ್ಣುಗಳು ಮತ್ತು ಅನೇಕ ಪಕ್ಷಿ-ಪ್ರಾಣಿಗಳಿಗೆ ಆಶ್ರಯ ನೀಡುತ್ತವೆ. ಮಣ್ಣು ರಕ್ಷಣೆ, ಮಳೆ ಮತ್ತು ಪ್ರಕೃತಿಯ ಸಮತೋಲನ-ಇವು ಮರಗಳಿಂದಲೇ ಸಾಧ್ಯ. ಮರಗಳಿಲ್ಲದೆ ಭೂಮಿಯ ಮೇಲೆ ಜೀವನ ಸಾಧ್ಯವಿಲ್ಲ. *ಮರ ನೆಡುವುದು ಇಂದಿ...

ಸ್ವಚ್ಛತಾ ಘನತ್ಯಾಜ್ಯ ಚಾಲಕರು, ಸಹಾಯಕರುಗಳ ನೇರಪಾವತಿ ಯೋಜನೆಗೆ ಒಳಪಡಿಸುವಂತೆ ಪ್ರತಿಭಟನೆ

Image
ಬೆಂಗಳೂರು ಜನವರಿ 30, 2026  ಸ್ವಚ್ಛತಾ ಕಾರ್ಮಿಕರ ಜ್ವಲಂತ ಸಮಸ್ಯೆಗಳ ಹಿನ್ನೆಲೆಯಲ್ಲಿ ಘನತ್ಯಾಜ್ಯ ಚಾಲಕರು, ಸಹಾಯರುಗಳನ್ನು ಕೂಡಲೇ ನೇರಪಾವತಿ ಯೋಜನೆಗೆ ಒಳಪಡಿಸುವಂತೆ ಕಾರ್ಮಿಕ ಸಂರಕ್ಷಣಟ ಟ್ರೇಡ್ ಯೂನಿಯನ್ ವತಿಯಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ ನೂರಾರು ಪೌರಕಾರ್ಮಿಕರು ಭಾಗವಹಿಸಿದ್ದರು. ಸಮಿತಿ ರಾಜ್ಯಾಧ್ಯಕ್ಷ ತ್ಯಾಗರಾಜ್ ಮಾತನಾಡಿ, ರಾಜ್ಯ ಸರ್ಕಾರ ನೇರ ಪಾವತಿ ಯೋಜನೆಗೆ ಘನತಾಜ್ಯ ಚಾಲಕರು ಸಹಾಯಕರನ್ನು ನೇರಪಾವತಿ ಯೋಜನೆಯಡಿ ಒಳಪಡಿಸುವಂತೆ ಆದೇಶಿಸಬೇಕು, ಕೊಟ್ಟ ಮಾತಿಗೆ ತಪ್ಪಿದ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಸ್ವಚ್ಛತಾ ಕೆಲಸಕ್ಕೆ ಬಹುಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗದ ಜನಾಂಗದವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಭಾರತ ಸಂವಿಧಾನದ ಆಶಯದಂತೆ ಮೂಲಭೂತ ಹಕ್ಕುಗಳು ಮತ್ತು ರಾಜ್ಯ ನಿರ್ದೇಶಕ ತತ್ವಗಳ ಆಡಿಯಲ್ಲಿ ವಿಶೇಷ ಆಧ್ಯತೆ ಮೇರೆಗೆ ಈ ಜನಾಂಗವನ್ನು ಎಲ್ಲಾ ಶೋಷಣೆಯಿಂದ ಸಂವಿಧಾನದ ಅನುಚ್ಛೇದ 46ರ ಪ್ರಕಾರ ರಕ್ಷಣೆ ಮಾಡಬೇಕಾದ ಹೊಣೆಯು ಸರ್ಕಾರದ ಮೇಲೆ ಇದೆ ಎಂದು ಹೇಳಿದರು. ಉಪ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗಳು ಧರಣಿನಿರತ ಕೆಲವು ನಾಯಕರನ್ನು ತಮ್ಮ ಕಛೇರಿಗೆ ಕರೆಸಿಕೊಂಡು ಮತ್ತೆ ಆಶ್ವಾಸನೆ ನೀಡಿ,ಈ ಸಿಬ್ಬಂದಿಯನ್ನು ಅಗತ್ಯ ಸೇವೆ ಎಂದು ಪರಿಗಣಿಸಲಾಗಿದ್ದ...

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಜನತಾ ಚಳುವಳಿ ಭಾರತ ಪಕ್ಷ'ದ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.

Image
ಬೆಂಗಳೂರು ಜನವರಿ 29, 2026: ಜನತಾ ಚಳುವಳಿ ಭಾರತ ಪಕ್ಷದ ವತಿಯಿಂದ ಮುಂಬರುವ ಮಹತ್ವದ ಚುನಾವಣೆಗಳ ಸಿದ್ಧತೆ ಮತ್ತು ರಾಜಕೀಯ ವಿದ್ಯಮಾನಗಳ ಕುರಿತು ಪತ್ರಿಕಾಗೋಷ್ಠಿಗಾಗಿ ಸಿದ್ಧಪಡಿಸಿದ ಸಮಗ್ರ ಮಾಹಿತಿ ಇಲ್ಲಿದೆ. 1. ಮುಂಬರುವ ಚುನಾವಣೆಗಳ ಸಿದ್ಧತೆ ಮತ್ತು ಉಸ್ತುವಾರಿಗಳ ನೇಮಕ ಪಕ್ಷವು ರಾಷ್ಟ್ರ ಮತ್ತು ರಾಜ್ಯ ಮಟ್ಟದ ಚುನಾವಣೆಗಳನ್ನು ಎದುರಿಸಲು ಸಜ್ಜಾಗಿದ್ದು, ಈ ಕೆಳಗಿನಂತೆ ಉಸ್ತುವಾರಿಗಳನ್ನು ನಿಯೋಜಿಸಲು ನಿರ್ಧರಿಸಲಾಗಿದೆ: * ಪಂಚ ರಾಜ್ಯಗಳ ಚುನಾವಣೆ (2026): ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ ಮತ್ತು ಪುದುಚೇರಿ ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೆ ರಾಷ್ಟ್ರೀಯ ಮಟ್ಟದ ಹಿರಿಯ ನಾಯಕರನ್ನು 'ಚುನಾವಣಾ ವೀಕ್ಷಕರು' ಹಾಗೂ 'ರಾಜ್ಯ ಉಸ್ತುವಾರಿ'ಗಳಾಗಿ ನೇಮಕ ಮಾಡಲಾಗುವುದು. ಕರ್ನಾಟಕ ವಿಧಾನಸಭಾ ಉಪಚುನಾವಣೆಗಳು: ತೆರವಾಗಿರುವ ಕ್ಷೇತ್ರಗಳಿಗೆ (ಉದಾಹರಣೆಗೆ: ಬಾಗಲಕೋಟೆ, ದಾವಣಗೆರೆ ದಕ್ಷಿಣ ಇತ್ಯಾದಿ) ಸ್ಥಳೀಯವಾಗಿ ಪ್ರಭಾವಿ ಹೊಂದಿರುವ ಮತ್ತು ಸಂಘಟನಾ ಚತುರರನ್ನು ಉಸ್ತುವಾರಿಗಳಾಗಿ ಘೋಷಿಸಲಾಗುವುದು. * ಸ್ಥಳೀಯ ಸಂಸ್ಥೆಗಳ ಚುನಾವಣೆ: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA), ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಚುನಾವಣೆಗೆ ಪ್ರತಿ ಜಿಲ್ಲೆಗೂ ಒಬ್ಬರು ಜಿಲ್ಲಾ ಚುನಾವಣಾ ಸಂಚಾಲಕ'ರನ್ನು ನೇಮಿಸಲಾಗುವುದು. 2. ಪಕ್ಷದ ಸಮಗ್ರ ನೀಲಿ ನಕ್ಷೆ (Roadmap 2026) * ಸಂಘಟನೆ ಬಲವರ...

ವಿಶೇಷ ಶಾಲಾ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸಾರ್ವತ್ರಿಕ ಮುಷ್ಕರ.

Image
ಬೆಂಗಳೂರು ಜನವರಿ 29, 2026 ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಂಘ ಹಾಗೂ ಕರ್ನಾಟಕ ರಾಜ್ಯ ವಿಕಲಚೇತನರ ಸೇವಾ ಸಂಸ್ಥೆಗಳ ಒಕ್ಕೂಟದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬೃಹತ್ ಪ್ರತಿಭಟನೆಯನ್ನು ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ರಾಜ್ಯದ ವಿಶೇಷ ಶಾಲೆಗಳಲ್ಲಿ ಸೇವಾ ನಿರತರಾಗಿರುವ ವಿಶೇಷ ಶಿಕ್ಷಕರು-ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ಯಾವುದೇ ಅನುದಾನ ದೊರಕದೆ ಇರುವ 25 ವರ್ಷ ಮೀರಿದ ವಯಸ್ಕ ಬುದ್ದಿಮಾಂದ್ಯ ಯುವಕ-ಯುವತಿಯರು ಹಾಗೂ ಮುಷ್ಕರದಲ್ಲಿ ಪಾಲ್ಗೊಂಡಿದ್ದರು.  ಸಂಘದ ಅಧ್ಯಕ್ಷ ಡಾ.ಕಾಂತಿ ಹರೀಶ್, ಒಕ್ಕೂಟದ ಅಧ್ಯಕ್ಷ ಸೋಮನಾಥ್ ಮಹಾಜನ್ ಶೆಟ್ಟರ್,ಮಾಧ್ಯಮ ಸಂಚಾಲಕ ಸಂಜಯ್ ಸಬರದ್ ಮಾತನಾಡಿ, ರಾಜ್ಯದ ಕೆಲವೊಂದು 34 ವಿಶೇಷ ಶಾಲೆಗಳಿಗೆ ಮಾತ್ರ 1982 ಅನುದಾನ ನೀತಿಯಂತೆ ಅನುದಾನ ನೀಡುತ್ತಿದೆ. ಅನುದಾನ ಇಲ್ಲದೆಯೇ ಸರಕಾರಿಯೇತರ ಸಂಸ್ಥೆಗಳು ವಿಶೇಷ ಶಾಲೆಗಳನ್ನು ನಡೆಸಿಕೊಂಡು ಬರುತ್ತಿವೆ, ರಾಜ್ಯ ಸಂಘದ ಪ್ರಬಲ ಹೋರಾಟದ ಫಲವಾಗಿ 2010-11ರಿಂದ ಅನುದಾನ ನೀಡಲು ನಿರ್ಧರಿಸಿದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನೂತನ ಅನುದಾನ ನೀತಿಯನ್ನು ಜಾರಿಗೆ ತಂದಿತ್ತು, "ಶಿಶು ಕೇಂದ್ರಿಕೃತ ಸಹಾಯಧನ ಯೋಜನೆ" ಈ ಯೋಜನೆಯಡಿಯಲ್ಲಿ ಶಿಕ್ಷಕರಿಗೆ ವೇತನವಾಗಲಿ, ಆರ್ಥಿಕ ಭದ್ರತೆಯಾಗಲೀ ಇರಲಿಲ್ಲ, ಕೇವಲ ಗೌರವಧನ ಮಾತ್ರ, 2010-11ರಲ್ಲಿ ವಿಶೇಷ ಶಿಕ್ಷಕರಿಗೆ ರೂ. ...

"ಓಲ್ಡ್ ಒರಿಜಿನಲ್ ವಿನಾಯಕ ಮೈಲಾರಿ ಹೋಟೆಲ್" ಅನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.

Image
ಮೈಲಾರಿ ಹೋಟೆಲ್ ನ ದೋಸೆಗೆ ಮನಸೋತ ಮುಖ್ಯಮಂತ್ರಿ ಸಿದ್ದರಾಮಯ್ಯ "ಓಲ್ಡ್ ಒರಿಜಿನಲ್ ವಿನಾಯಕ ಮೈಲಾರಿ ಹೋಟೆಲ್" ಅನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.  ಬೆಂಗಳೂರಿನ ಇಂದಿರಾನಗರದ ಹಳೇ ತಿಪ್ಪಸಂದ್ರದಲ್ಲಿ ನೂತನವಾಗಿ ಆರಂಭಿಸಲಾದ "ಓಲ್ಡ್ ಒರಿಜಿನಲ್ ವಿನಾಯಕ ಮೈಲಾರಿ ಹೋಟೆಲ್" ಅನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು. ಅಲ್ಲದೆ, ಹೋಟೆಲ್‌ನಲ್ಲಿ ಬೆಳಗಿನ ಉಪಹಾರ ಸೇವಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ಹಂಚಿಕೊಂಡಿದ್ದಾರೆ. 1938ರಲ್ಲಿ ಮೈಸೂರಿನಲ್ಲಿ ಆರಂಭವಾದ ಮೈಲಾರಿ ಹೋಟೆಲ್ ತನ್ನ ರುಚಿ ಹಾಗೂ ಗುಣಮಟ್ಟದ ತಿನಿಸುಗಳಿಗೆ ಹೆಸರುವಾಸಿಯಾಗಿದೆ. ನನ್ನ ಕಾಲೇಜು ದಿನಗಳಲ್ಲಿ ಆಗಾಗ್ಗೆ ಈ ಹೋಟೆಲ್‌ಗೆ ಹೋಗುತ್ತಿದ್ದೆ, ಈಗಲೂ ಮೈಸೂರಿಗೆ ಹೋದ ವೇಳೆ ಬಿಡುವಾದಾಗ ಭೇಟಿ ನೀಡುತ್ತೇನೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.  'ನನ್ನೂರಿನ ಮೈಲಾರಿಯ ರುಚಿಕರ ತಿಂಡಿ ಸವಿಯುವ ಅವಕಾಶ ಬೆಂಗಳೂರಿನ ಜನರಿಗೆ ಈಗ ಸಿಗುತ್ತಿರುವುದು ಖುಷಿಯ ವಿಚಾರ. ಶುಭವಾಗಲಿ' ಎಂದು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ, ಉಪಾಹಾರ ಸವಿಯುತ್ತಿರುವ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.

ಲ್ಯಾಂಡ್ ಲಾರ್ಡ್ ಸಿನಿಮಾ ಒಂದು ಅದ್ಬುತ ಕಥೆ, ಉಳ್ಳವರ ಮಾನಸಿಕ ಸ್ಥಿತಿ, ಮನೋಭಾವ ಅನಾವರಣ

Image
ಧಣಿಗಳ ಕ್ರೌರ್ಯ, ಕ್ರೂರತೆ, ಮತ್ತು ಕಾರ್ಯಾಂಗ ವ್ಯವಸ್ಥೆಯಲ್ಲಿ ಕಠಿಣತೆಯ ಮುಂದೆ ಕೆಳವರ್ಗದ ಜನರ ಅಲ್ಪಬಲ, ಹಾಗೂ ನ್ಯಾಯಾಂಗ ಅಡಿಯಲ್ಲಿ ವಿಚಾರಣೆಗೆ ಸಿಕ್ಕಿ ಅಸಹಾಯಕನಾಗಿ ಕಾಣುವ ನಾಯಕನಟ,   ಹುಟ್ಟುಬಟ್ಟೆಗೆ, ಬದುಕಿಗೆ ಅಗತ್ಯವುಳ್ಳವ ಜನರು ಅನುಭವಿಸುವ ಕಠಿಣ ಸವಾಲು, ಜಟಿಲ ಜಂಜಾಟ, ಈ ಅಸಹಾಯಕದ ಕಥೆಯಲ್ಲಿ  ತಮ್ಮವರೇ ತಮಗೆ ಶತ್ರುಗಳು ಎಂದು ತೋರಿಸುವ ವಿಭಿನ್ನವಾದ ದೃಶ್ಯಗಳು, ಇವೆಲ್ಲವನ್ನೂ ಅನುಭವಿಸಿ, ಎದೆಯೊಡ್ಡಿ ಮೆಟ್ಟಿ ನಿಲ್ಲುವ ನಾಯಕ ದುನಿಯಾ ವಿಜಯ್ (ರಾಚೆಯ್ಯನ ಪಾತ್ರ) ಅದಕ್ಕೆ ಸಾರಥಿಯಾಗಿ ನಾಯಕ ನಟಿ  ರಚಿತಾ ರಾಮ್ (ನಿಂಗವ್ವನಾಗಿ) ತಂದೆ ತಾಯಿಗೆ ಸಾಥ್ ಕೊಡುವ ನಾಯಕ ನಟನ ಮಗಳು ಮೋನಿಕಾ ವಿಜಯ್ ( ಭಾಗ್ಯ ಪೊಲೀಸ್ ಕಾನ್ಸ್ಟೇಬಲ್ ನ ಪಾತ್ರದಲ್ಲಿ)  ಇವೆಲ್ಲರ ಪಾತ್ರಗಳು ನಿಜಕ್ಕೂ ಅದ್ಬುತ ಹಾಗೂ ಇದು ಸಿನಿಮಾದ ಕಥೆಗೆ ಒಂದು ರೀತಿಯ ಪ್ಲಸ್ ಪಾಯಿಂಟ್,  ಈ ಸಿನಿಮಾದಲ್ಲಿರುವ ಪ್ರತಿಯೊಂದು ಸೀನ್ ಈ ಸಿನಿಮಾದ ಹೊಸ ಕಥೆಯನ್ನು ಹೇಳಲು ಪ್ರಾರಂಭಿಸುತ್ತದೆ,  ನಾಯಕನಟ, ನಾಯಕಿ, ಮತ್ತು ನಾಯಕನ ಮಗಳು ತಮ್ಮಗಳ ಪಾತ್ರದಲ್ಲಿ ಹೋರಾಟಗಾರರಾಗಿ ಪರವರ್ತನೆ ಆಗುವುದು ಮತ್ತು ವ್ಯವಸ್ಥೆಯ ದಿಕ್ಕನ್ನು ಬದಲಾಯಿಸುಲು ಛಲ ತೊಡುವುದು, ಒಂದು ಸೂರಿಗಾಗಿ ಒಂದು ಇಡಿ ತುತ್ತಿಗಾಗಿ ಉಳ್ಳವರು ಇಲ್ಲದವರ ಮೇಲೆ ಮಾಡುವ ಸಂಘರ್ಷ, ಎರಡು ಎಕರೆ ಜಮೀನು ಪಡೆಯಲು ಉಮಾಶ್ರೀ ರವರ ಛಲ...

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಜೈ ಕರುನಾಡು ಮಾತೃ ಭೂಮಿ ಸಂಘ'ದ ಸದಸ್ಯರಿಂದ ಪತ್ರಿಕಾಗೋಷ್ಠಿ

Image
ಈ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಈ. ಈ. ವಿರೂಪಾಕ್ಷ ಅವರು ಮಾತನಾಡಿದರು.   ನಮ್ಮ ಸಂಘವು ಕನ್ನಡ ಭಾಷೆ ಉಳಿಸಲು ನಿರಂತರ ಹೋರಾಟ ಮಾಡುವುದು, ನಿರುದ್ಯೋಗ ಸಮಸ್ಯೆ ಪರಿಹರಿಸಲು ಸಲಹೆ ನೀಡುವುದು, ಗ್ರಾಮೀಣ ನೈರ್ಮಲ್ಯದ ಬಗ್ಗೆ ಹೋರಾಟ ಮಾಡುವುದು, ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಶಿಕ್ಷಣ ನೀಡುವುದು, ಖಾಸಗಿ ಕಂಪನಿಗಳ ಸಿ.ಎಸ್.ಆರ್ ನಿಧಿಯನ್ನು ಸಮರ್ಪಕವಾಗಿ ಬಳಸುವುದು ಹಾಗೂ ಭ್ರಷ್ಟಾಚಾರ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುವುದು ನಮ್ಮ ಸಂಘದ ಉದ್ದೇಶಗಳಾಗಿವೆ ಎಂದು ತಿಳಿಸಿದರು.

ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ 8ನೇ ಶಾಖೆ ಆರಂಭವಾಯಿತು.

Image
ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ 8ನೇ ಶಾಖೆ ಆರಂಭವಾಯಿತು.  ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಹಾಗೂ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕ ಟಿ.ಎ. ಶರವಣ ಅವರು ಕನಕಪುರ ರಸ್ತೆಯ ರಘುವನಹಳ್ಳಿಯಲ್ಲಿ ಶಾಖೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಟಿ ರುಕ್ಷ್ಮಿಣಿ ವಸಂತ್ ಹಾಗೂ ಬಿಗ್‌ಬಾಸ್-12ರ ವಿಜೇತ ಗಿಲ್ಲಿ ನಟರಾಜ್ ವಿಶೇಷ ಆಹ್ವಾನಿತರಾಗಿದ್ದರು.   ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿ, 'ಸಾಯಿಬಾಬಾ ಅವರ ಭಕ್ತರಾದ ಶರವಣ ಅವರು ಸಾಯಿ ಗೋಲ್ಡ್‌ ಪ್ಯಾಲೇಸ್ ಸ್ಥಾಪನೆ ಮಾಡಿದ್ದಾರೆ. ಗ್ರಾಹಕರಿಗೆ ಉತ್ತಮ ಚಿನ್ನಾಭರಣ ಲಭಿಸಬೇಕು ಎಂದು ಇದೀಗ 8ನೇ ಶಾಖೆಯನ್ನು ಪ್ರಾರಂಭಿಸಿದ್ದಾರೆ. 500ಕ್ಕೂ ಹೆಚ್ಚು ನೌಕರರು ಕಾರ್ಯ ನಿರ್ವಹಿಸುತ್ತಿದ್ದು, ಅವರ ಕುಟುಂಬಗಳಿಗೆ ಆಸರೆಯಾಗಿದ್ದಾರೆ' ಎಂದರು. ಟಿ.ಎ.ಶರವಣ ಮಾತನಾಡಿ, 'ಬೆಂಗಳೂರಿನಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆ ಹೋಗಿ ಶಾಪಿಂಗ್ ಮಾಡಲು, ಸಂಚಾರ ದಟ್ಟಣೆಯಿಂದ ಒಂದು ದಿನ ವ್ಯರ್ಥವಾಗುತ್ತದೆ. ಜನರ ಅನುಕೂಲಕ್ಕಾಗಿ ಕನಕಪುರ ರಸ್ತೆಯಲ್ಲಿ ಶಾಖೆ ಆರಂಭಿಸಲಾಗಿದೆ. ಮಂಡ್ಯ, ಚನ್ನಪಟ್ಟಣ, ರಾಮನಗರದ ಜನತೆಗೂ ಇದು ಹತ್ತಿರವಾಗುತ್ತದೆ' ಎಂದರು. 'ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರುತ್ತಿದ್ದು,  ಅಗತ್ಯಕ್ಕೆ ತಕ್ಕ...

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ "ಪದ್ಮವ್ಯೂಹಂ" ಚಿತ್ರದ ಮುಹೂರ್ತ ಸಮಾರಂಭ ನಡೆಯಿತು.

Image
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ "ಪದ್ಮವ್ಯೂಹಂ" ಚಿತ್ರದ ಮುಹೂರ್ತ ಸಮಾರಂಭ ನಡೆಯಿತು.  ಕೆ. ಆರ್. ಸಿನಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಈ ಸಿನಿಮಾ ಮೂಡಿ ಬರಲಿದೆ. ನಟರಾದ ಹರ್ಷಿತ್ ಶೆಟ್ಟಿ, ಸಿದ್ದು, ನಟಿ ಮಾಣಿಕಾ ರಾಜ್, ತಮಿಳು ನಟ ಸಂಪತ್ ರಾಜ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ನಿರ್ದೇಶಕ ಈಶ್ವರ್ ಚೆಲ್ಲಾ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು. "ಪದ್ಮವ್ಯೂಹಂ" ಚಿತ್ರ ವಿಶೇಷ ಕಥಾನಕ ಒಳಗೊಂಡಿದೆ ಎಂದು ಈಶ್ವರ್ ಚೆಲ್ಲಾ ಅವರು ಹೇಳಿದರು.  ಪದ್ಮವ್ಯೂಹಂ ಚಿತ್ರವು 2027ಮಾರ್ಚ್ 1ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ ಎಂದು ಚಿತ್ರದ ನಿರ್ಮಾಪಕ ಕುಮಾರ್ ಅವರು ತಿಳಿಸಿದರು. ಈ ಚಿತ್ರವು ಪ್ಯಾನ್ ಇಂಡಿಯಾ ಸಿನಿಮಾ ಆಗಲಿದ್ದು, 4ಕ್ಕೂ ಹೆಚ್ಚು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರದ ಸಹ ನಿರ್ದೇಶಕ ಬಿ.ಎನ್. ಸಂತೋಷ್ ಕುಮಾರ್ ಅವರು ತಿಳಿಸಿದರು.

Joyalukkas‘ Brilliance Diamond Jewellery Show’in Bengaluru from 16th January to 1st February, 2026

Image
Bengaluru, Karnataka – January 2026:The world’s favourite jeweller, Joyalukkas, is all set to mesmerise Bengaluru with the Brilliance Diamond Jewellery Show, from 16thJanuary 2026 at its MG Road, Bengaluru showroom. This exclusive showcase promises an extraordinary celebration of artistry, elegance, and innovation in diamond jewellery. Featuring an exquisite range that spans opulent bridal statements to refined contemporary designs for everyday wear, the exhibition brings together timeless craftsmanship and modern sensibilities. Each creation reflects exceptional detailing and design excellence, available only for a limited period during the show. Speaking on the occasion, Dr. Joy Alukkas, Chairman & Managing Director of Joyalukkas Group, said: “The Brilliance Diamond Jewellery Show celebrates our commitment to excellence and our passion for creating jewellery that resonates with elegance and individuality. Bengaluru has always been special to us, and we are delighted t...

Guarantee schemes put Karnataka at top in per capita income: K.J. George

Image
Bengaluru, January 10, 2026: Energy Minister K.J. George attributed Karnataka's top ranking in per capita income to the government's guarantee schemes.  Speaking at the Founder's Day celebration at Dr. B.R. Ambedkar Medical and Hospital, he said, "Our government has empowered women, who are known for sacrifice and love, through these schemes. This has led to our state's rise to the top in per capita income." George explained that the schemes would provide around Rs 5,500 into each family, boosting economic activity and creating thousands of jobs. "The schemes have increased people's purchasing power, strengthening families and the state's economy," he added. Explaining the idea behind the inception of the guarantee schemes, the minister recalled, Congress National leader Rahul Gandhi's Bharat Jodo Yatra spanning 3200 kms. When yatra entered Karnataka, CM Siddaramaiah and Deputy CM, D.K. Shivakumar had joined him. D...

ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ; ಜನವರಿ 2026 ರ ಅವಧಿಗೆ ಪ್ರವೇಶ

Image
ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ;ಜನವರಿ 2026 ರ ಅವಧಿಗೆ ಪ್ರವೇಶ.  ಬೆಂಗಳೂರು ಜನವರಿ 13; ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಜನವರಿ 2026 ಅವಧಿಗೆ ಪ್ರವೇಶವನ್ನು ಘೋಷಿಸಿದೆ.  ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮೋ ಮತ್ತು ಸರ್ಟಿಫಿಕೇಟ್ ಹಂತಗಳಲ್ಲಿ, ಆನ್ನೈನ್ ಅರ್ಜಿಯನ್ನು 2write https://ignouadmission.samarth.edu.in , ಅಪ್ಲೋಡ್ ಮಾಡಿ ಪ್ರವೇಶ ಪಡೆಯಬಹುದಾಗಿದೆ. SC/ST ವಿದ್ಯಾರ್ಥಿಗಳಿಗೆ ಶುಲ್ಕ, ವಿನಾಯಿತಿ,ಬ್ಯಾಚುಲರ್ ಆಫ್ ಆರ್ಟ್ಸ್(BAM) ಬ್ಯಾಚುಲರ್ ಆಫ್ ಕಾಮರ್ಸ್ (BCOME) ಮತ್ತು ಬ್ಯಾಚುಲರ್ ಆಫ್ ಸೈನ್ಸ್ (BSCM) ಕಾರ್ಯಕ್ರಮಗಳಿಗೆ ವಾರ್ಷಿಕ ಆದಾಯ 25 ಲಕ್ಷಕ್ಕಿಂತ ಕಡಿಮೆ ಇರುವ ಎಸ್ ಸಿ ಮತ್ತು ಎಸ್ ಟಿ ವಿದ್ಯಾರ್ಥಿಗಳು ಪ್ರವೇಶ ಶುಲ್ಕದಲ್ಲಿ 50% ವಿನಾಯಿತಿಯನ್ನು ಪಡೆಯಬಹುದು. ಪ್ರವೇಶ ಪರೀಕ್ಷೆ ಇಲ್ಲದೆ ಎಂಬಿಎಗೆ ಇನ್ನೂ ನೇರ ಪ್ರವೇಶವನ್ನು ಒದಗಿಸುತ್ತಿದೆ ಎಂದು ಪ್ರಾದೇಶಿಕ ನಿರ್ದೇಶಕರು ಡಾ.ಎಂ.ಷಣ್ಮುಗಂ ಮಾಹಿತಿ ನೀಡಿದರು.  ಕಾರ್ಯಕ್ರಮಗಳ ಪಟ್ಟಿ ಮತ್ತು ಸಂಪೂರ್ಣ ವಿವರಗಳಿಗಾಗಿ https://ignouadmission samarth.edu.in/index.php/site/programmes ) ಹೆಚ್ಚಿನ ವಿವರಗಳಿಗಾಗಿ ಇನ್ನೂ ಪ್ರಾದೇಶಿಕ ಕೇಂದ್ರ ಬೆಂಗಳೂರು, ಸಿಂಗೇನ ಅಗ್ರಹಾರ ರಸ್ತೆ, ರಿಯೋ ಬ್ಯಾಡ್ಮಿಂಟನ್ ಅಕಾಡೆಮಿಯ ಬಳಿ, ಗುಳಿಮಂಗಲ, ಆನೇಕಲ್ ತಾಲೂಕ್, ಬೆಂಗಳೂರು ...

ಕ್ಯಾನ್ಸರ್ ಕುರಿತು ಭಯ ಬೇಡ, ಜಾಗೃತಿ ಅಗತ್ಯ

Image
ಬೆಳಗಾವಿ: ಕ್ಯಾನ್ಸರ್ ಎಂಬ ರೋಗದ ಬಗ್ಗೆ ಅನಗತ್ಯ ಭಯ ಹೊಂದುವ ಅಗತ್ಯವಿಲ್ಲ. ಸರಿಯಾದ ಮಾಹಿತಿ ಮತ್ತು ಸಮಯೋಚಿತ ತಪಾಸಣೆ ಮೂಲಕ ಕ್ಯಾನ್ಸರ್‌ನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಬಹುದು. ಜಾಗೃತಿ ಕಾರ್ಯಕ್ರಮಗಳು ಮತ್ತು ನಿಯಮಿತ ಆರೋಗ್ಯ ತಪಾಸಣೆಗಳು ರೋಗ ನಿಯಂತ್ರಣಕ್ಕೆ ಸಹಕಾರಿಯಾಗುತ್ತವೆ. ಆರೋಗ್ಯಕರ ಜೀವನಶೈಲಿ ಮತ್ತು ತಂಬಾಕು ದೂರವಿಡುವುದು ಅತ್ಯಂತ ಮುಖ್ಯ. ಭಯಕ್ಕಿಂತ ಜಾಗೃತಿಯೇ ಕ್ಯಾನ್ಸರ್ ವಿರುದ್ಧದ ಶಕ್ತಿಯುತ ಆಯುಧವಾಗಿದೆ ಎಂದು ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಪ್ರಾದೇಶಿಕ ವ್ಯವಸ್ಥಾಪಕರಾದ ಸಂತಾನಿ ದಂಡಿನ ಅಭಿಪ್ರಾಯ ಪಟ್ಟರು. ಬೆಳಗಾವಿ ನಗರದ ಕನಬರಗಿಯಲ್ಲಿ ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಹಿಂಡಾಲ್ಕೊ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ, ಬೆಳಗಾವಿ ಇವರ ಸಂಯುಕ್ತ ಕ್ಯಾನ್ಸರ್ ತಪಾಸಣೆ ಹಾಗೂ ಜಾಗೃತಿ ಶಿಬಿರ ಜರುಗಿತು. ಶಿಬಿರದಲ್ಲಿ ಮಹಿಳೆಯರಿಗೆ ಸ್ಕ್ರೀನಿಂಗ್ ಮೂಲಕ ಕ್ಯಾನ್ಸರ್ ತಪಾಸಣೆ ನಡೆಸಲಾಗಿದ್ದು, ಮ್ಯಾಮೋಗ್ರಾಫಿ ಮೂಲಕ ಸ್ತನ ಕ್ಯಾನ್ಸರ್ ಪರೀಕ್ಷೆಯನ್ನೂ ಕೈಗೊಳ್ಳಲಾಯಿತು. ಇದೇ ವೇಳೆ ಪುರುಷರಿಗೆ ಬಾಯಿ ಹಾಗೂ ಗಂಟಲು ಕ್ಯಾನ್ಸರ್ ಸಂಬಂಧಿತ ತಪಾಸಣೆಗಳನ್ನೂ ನಡೆಸಲಾಯಿತು. ಕೆ.ಎಲ್.ಇ. ಕ್ಯಾನ್ಸರ್ ಆಸ್ಪತ್ರೆಯ ನುರಿತ ವೈದ್ಯರ ತಂಡ ಶಿಬಿರದಲ್ಲಿ ಭಾಗವಹಿಸಿ ತಪಾಸಣಾ ಕಾರ್ಯವನ್ನು ಪರಿಣಾಮಕಾರಿಯಾಗಿ ನೆರವೇರಿಸಿತು. ಶಿಬಿರದ ಪ್ರಯೋಜನವನ್ನು ಸುಮಾರು 150ಕ್ಕೂ ಹೆಚ್ಚು ಜನರು ಪಡೆದುಕೊಂಡರ...

ಬೆಂಗಳೂರು ಉತ್ತರ ಹಾಗೂ ದಕ್ಷಿಣ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ'ಭೂಸುರಕ್ಷಾ ಯೋಜನೆ'ಗೆ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರವರು ಚಾಲನೆ ನೀಡಿದರು.

Image
6 ತಿಂಗಳಲ್ಲಿ ಭೂ ದಾಖಲೆ ಡಿಜಿಟಲೀಕರಣ;  ಉಪವಿಭಾಗಾಧಿಕಾರಿ ಕಚೇರಿಯ ದಾಖಲೆಗಳ ಸ್ಕ್ಯಾನಿಂಗ್‌ಗೆ ಚಾಲನೆ ಬೆಂಗಳೂರು ನಗರ ಜಿಲ್ಲೆಯ ಉತ್ತರ ಮತ್ತು ದಕ್ಷಿಣ ಉಪವಿಭಾಗಾಧಿಕಾರಿಗಳ ಕಚೇರಿಯ ಕಂದಾಯ ದಾಖಲಾತಿಗಳ ಸ್ಕ್ಯಾನಿಂಗ್ ಮತ್ತು ಡಿಜಟಲೀಕರಣಗೊಳಿಸುವ ಭೂಸುರಕ್ಷಾ ಯೋಜನೆಯನ್ನು ಕಂದಾಯ ಸಚಿವ ಕೃಷ್ಣ ಬೈರೇಗೌಡರವರು ನಗರದ ಕಂದಾಯ ಭವನದ ಬೆಂ. ಉತ್ತರ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಉದ್ಘಾಟಿಸಿದರು.   ಈ ಕಾರ್ಯಕ್ರಮದಲ್ಲಿ ಪ್ರಿನ್ಸಿಪಲ್ ಸೆಕ್ರೆಟರಿ ರಾಜೇಂದ್ರ ಕುಮಾರ್ ಕಟಾರಿಯ, ಜಿಲ್ಲಾಧಿಕಾರಿ ಜಗದೀಶ್, ಎಡಿಸಿ ಜಗದೀಶ್ ನಾಯಕ್ ಮತ್ತಿತರ ಸಿಬ್ಬಂದಿ ಭಾಗಿಯಾಗಿದ್ದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡರು, ಈಗಾಗಲೇ 62 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಿ ಪೋರ್ಟಲ್‌ಗೆ ಹಾಕಲಾಗಿದೆ. 70 కాలుళ్లకు రబీరియల్లి ಕೆಲಸ ಪೂರ್ಣ ಮುಗಿದಿದೆ. ಉಳಿದ ಕಡೆ ಆರು ತಿಂಗಳಲ್ಲಿ ಮುಗಿಯುವ ವಿಶ್ವಾಸವಿದೆ. ತಾಲ್ಲೂಕು ಕಚೇರಿಗಳಿಂದ 39,39,569 ಪುಟಗಳ ದಾಖಲೆಯನ್ನು ಜನರು ಆನ್‌ಲೈನ್ ಮೂಲಕವೇ ಪಡೆದುಕೊಂಡಿದ್ದಾರೆ' ಎಂದರು. 'ಈಗಾಗಲೇ ಅಪ್ಲೋಡ್ ಆಗಿರುವ ಉಪವಿಭಾಗಾಧಿಕಾರಿ ಕಚೇರಿಗಳಲ್ಲಿನ ಕಂದಾಯ ದಾಖಲೆಗಳ ಡಿಜಿಟಲೀಕರಣಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸೋಮವಾರ ಚಾಲನೆ ನೀಡಿದರು. ದಾಖಲೆಗಳ ನೈಜತೆ ಅರಿಯುವಂತೆ ಸುತ್ತೋಲೆ ಹೊರಡಿಸಲಾಗಿದೆ. ದಾಖಲೆ ಗಳ ತಿದ್ದುಪಡಿ, ನಕಲು ಮಾಡಿ ದಾಖಲೆ ಅಪ್ಲೋ...

ಬೆಂಗಳೂರಿನಲ್ಲಿ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರವರು 'ಭೂಸುರಕ್ಷಾ ಯೋಜನೆ'ಗೆ ಚಾಲನೆ ನೀಡಿದರು.

Image
ಬೆಂಗಳೂರಿನಲ್ಲಿ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರವರು 'ಭೂಸುರಕ್ಷಾ ಯೋಜನೆ'ಗೆ ಚಾಲನೆ ನೀಡಿದರು.  ಬೆಂಗಳೂರು ನಗರ ಜಿಲ್ಲೆಯ ಉತ್ತರ ಮತ್ತು ದಕ್ಷಿಣ ಉಪವಿಭಾಗಾಧಿಕಾರಿಗಳ ಕಚೇರಿಯ ಕಂದಾಯ ದಾಖಲಾತಿಗಳ ಸ್ಕ್ಯಾನಿಂಗ್ ಮತ್ತು ಡಿಜಟಲೀಕರಣಗೊಳಿಸುವ ಭೂಸುರಕ್ಷಾ ಯೋಜನೆಯನ್ನು ಕಂದಾಯ ಸಚಿವ ಕೃಷ್ಣ ಬೈರೇಗೌಡರವರು ಇಂದು ನಗರದ ಕಂದಾಯ ಭವನದ ಬೆಂ. ಉತ್ತರ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಉದ್ಘಾಟಿಸಿದರು.   ಈ ಕಾರ್ಯಕ್ರಮದಲ್ಲಿ ಪ್ರಿನ್ಸಿಪಲ್ ಸೆಕ್ರೆಟರಿ ರಾಜೇಂದ್ರ ಕುಮಾರ್ ಕಟಾರಿಯ, ಜಿಲ್ಲಾಧಿಕಾರಿ ಜಗದೀಶ್, ಎಡಿಸಿ ಜಗದೀಶ್ ನಾಯಕ್ ಮತ್ತಿತರ ಸಿಬ್ಬಂದಿ ಭಾಗಿಯಾಗಿದ್ದರು.

ಬೆಂಗಳೂರಿನ ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್ ನಲ್ಲಿ ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದಿಂದ "ನಾರಿ ಶಕ್ತಿ ರಾಷ್ಟ್ರೀಯ ಸಮ್ಮೇಳನ-2026" ನಡೆಯಿತು.

Image
ಆರ್ಯ ಈಡಿಗ ಮಹಿಳಾ ಸಂಘದ ನಾರಿ ಶಕ್ತಿ ರಾಷ್ಟ್ರೀಯ ಮಹಿಳಾ ಸಮ್ಮೇಳನ  ಆರ್ಯ ಈಡಿಗ ಸಮುದಾಯದ ಎಲ್ಲಾ ಪಂಗಡಗಳ ಮಹಿಳೆಯರು ಒಗ್ಗೂಡ ಬೇಕು; ಸಂಸದ ಶ್ರೀನಿವಾಸ ಪೂಜಾರಿ  ಬ್ರಹ್ಮಶ್ರೀ ನಾರಾಯಣ ಗುರು ಅಸ್ಪೃಶ್ಯತೆ ವಿರುದ್ಧ ಹೋರಾಟ ಮಾಡಿದ ಮಹಾನ್ ನಾಯಕ; ಸಚಿವ ರಾಮಲಿಂಗಾ ರೆಡ್ಡಿ. ಬೆಂಗಳೂರು ಜನವರಿ 4, 2026  ಆರ್ಯ ಈಡಿಗ ಸಮುದಾಯದ ಎಲ್ಲಾ ಪಂಗಡಗಳ ಮಹಿಳೆಯರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಅವಶ್ಯಕತೆ ಇದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.  ಭಾನುವಾರ ನಿಮಾನ್ಸ್ ಸಭಾಂಗಣದಲ್ಲಿ ಆರ್ಯ ಈಡಿಗ ಮಹಿಳಾ ಸಂಘದಿಂದ ಆಯೋಜಿಸಲಾಗಿದ್ದ ನಾರಿಶಕ್ತಿ ರಾಷ್ಟ್ರೀಯ ಈಡಿಗ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು,ಈಡಿಗ ಸಮುದಾಯಗಳು ಮತ್ತಷ್ಟು ಸಂಘಟಿತರಾಗಬೇಕು,ಆಶ್ರಯ ಆರಾಧನ ಯೋಜನೆ ಮೂಲಕ ಮಾಜಿ ಸಿಎಂ ಬಂಗಾರಪ್ಪ ಅವರು ಬಡವರಿಗೆ ಸೂರು ಕಲ್ಪಿಸಿದರು,ಬ್ಯಾಂಕ್ ರಾಷ್ಟ್ರೀಕರಣ ಮಾಡಿ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರು ಬಡವರು ಬ್ಯಾಂಕ್ ನೋಡುವಂತೆ ಆಯಿತು ಸಮಾಜದ ಹಿರಿಯರಾದ ಕಾಗೋಡು ತಿಮ್ಮಪ್ಪ ಅವರು ಬಡವರಿಗೆ ಹಕ್ಕು ಪತ್ರ ನೀಡಿದರು ಈಡಿಗ ಸಮುದಾಯದ ಮಹಿಳೆಯರು ಕೂಡ ರಾಜಕೀಯ ಕ್ಷೇತ್ರಕ್ಕೆ ಬರುವಂತಾಗಬೇಕು ಎಂದರು.  ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ,ಚಿಕ್ಕವನಿದ್ದಾಗ ನನಗೂ ನಮ್ಮೂರಿನಲ್ಲಿ ಅಸ್ಪೃಶ್ಯತೆಯ ಅನುಭವವಾಗಿತ್ತು ನಮ್ಮೂರಿನ ...

ಜನವರಿ 4ರಂದು ವಿಶ್ವ ಕರ್ಮ ಜನಜಾಗೃತಿ ಸಮಾವೇಶ ಮತ್ತು ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣ ದಿನಾಚರಣೆ

Image
ಬೆಂಗಳೂರು: ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ವತಿಯಿಂದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹೆಗ್ಗನಹಳ್ಳಿ ಕ್ರಾಸ್ ನೀಲಕಂಟೇಶ್ವರ ಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ಜನವರಿ 4ರಂದು ವಿಶ್ವಕರ್ಮ ಜನಜಾಗೃತಿ ಸಮಾವೇಶ ಮತ್ತು ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣ ದಿನಾಚರಣೆ ಕಾರ್ಯಕ್ರಮ ಕುರಿತು ಮಾಧ್ಯಮಗೋಷ್ಟಿ ಏರ್ಪಡಿಸಿದ್ದರು. ಸಮಾಜದ ಮುಖಂಡರಾದ ಕೆ.ಎನ್.ಶ್ರೀಧರ್, ಬೆಂಗಳೂರುನಗರ ಜಿಲ್ಲಾಧ್ಯಕ್ಷ ಸಿ.ಎನ್.ಗಂಗಾಧರ್ ಚಾರ್, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಹೆಚ್.ಜಿ.ಜಗದೀಶ್, ಸುಂಕದಕಟ್ಟೆ ಅಧ್ಯಕ್ಷರಾದ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಎಂ.ಕೆ.,ಉಪಾಧ್ಯಕ್ಷರಾದ ನಾಗರಾಜು ಎಸ್.ರವರು ಭಾಗವಹಿಸಿದ್ದರು. ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಮಾಜಿ ವಿಧಾನ ಪರಿಷತ್ ಸದಸ್ಯರು ಅಧ್ಯಕ್ಷರಾದ ಕೆ.ಪಿ.ನಂಜುಂಡಿರವರ ನೇತೃತ್ವದಲ್ಲಿ ಮಹಾಸಭಾ ಬಲಿಷ್ಠ ಸಂಘಟನೆಯಾಗಿದೆ.  ವಿಶ್ವಕರ್ಮ ಸಮುದಾಯವು ರಾಜ್ಯದಲ್ಲಿ 45ಲಕ್ಷ ಜನರು ಇದ್ದಾರೆ.  ಚಾಮರಾಜನಗರದಲ್ಲಿ ವಿಶ್ವಕರ್ಮ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಮೀಸಲಾತಿ ಇದೆ. ಕೆ.ಪಿ.ನಂಜುಂಡಿರವರ ಹೋರಾಟದ ಫಲದಿಂದ ವಿಶ್ವಕರ್ಮ ಅಭಿವೃದ್ಧಿ ನಿಗಮ , ಅಮರಶಿಲ್ಪಿ ಜಕಣಾಚಾರಿ ಜನ್ಮದಿನಾಚರಣೆ ರಾಜ್ಯ ಸರ್ಕಾರ ಅಚರಣೆ ಮಾಡುತ್ತಿದೆ. ವಿಶ್ವಕರ್ಮ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ವರದಿ ಸಮರ್ಪಕವಾಗಿವಾಗಿಲ್ಲ, ಹೊಸದಾಗಿ ಕುಲಶಾಸ್ತ್ರೀಯ ಅಧ್ಯಯನ...