Posts

Showing posts from February, 2026

ನೇಮಕಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸದಿರುವುದನ್ನು ವಿರೋಧಿಸಿ ಬಗ್ಗೆ ಉಗ್ರ ಹೋರಾಟ ಮಾಡುವುದಾಗಿ ಡಾ|| ಎನ್.ಮೂರ್ತಿ ಅವರು ಎಚ್ಚರಿಕೆ ನೀಡಿದರು.

Image
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಬಿ) ರಾಷ್ಟೀಯ ಅಧ್ಯಕ್ಷರಾದ ಡಾ|| ಎನ್.ಮೂರ್ತಿ ಅವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.  ನೇಮಕಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸದಿರುವುದನ್ನು ವಿರೋಧಿಸಿ ಬಗ್ಗೆ ಉಗ್ರ ಹೋರಾಟ ಮಾಡುವುದಾಗಿ ಡಾ|| ಎನ್.ಮೂರ್ತಿ ಅವರು ಎಚ್ಚರಿಕೆ ನೀಡಿದರು.  ಪರಿಶಿಷ್ಟರ ಮೀಸಲಾತಿ 101 ಪರಿಶಿಷ್ಟ ಜಾತಿಗಳ ನಡುವೆ ಸಮಾನವಾಗಿ ಹಂಚಿಕೆಯಾಗಿಲ್ಲ. ಆದ್ದರಿಂದ ಮೀಸಲಾತಿಯನ್ನು ವರ್ಗೀಕರಣ ಮಾಡಬೇಕು ಎಂದು ಮಾದಿಗ ಮತ್ತು ಸಂಭಂದಿತ ಜಾತಿಗಳು ಕಳೆದ 35 ವರ್ಷಗಳಿಂದ ನಿರಂತರ ಹೋರಾಟ ನಡೆಸಿವೆ. ಈ ಹೋರಾಟಕ್ಕೆ ಮಣಿದು ಸುಪ್ರೀಂಕೋರ್ಟ್‌ನ 7 ಜನ ನ್ಯಾಯಾದೀಶರ ಪೀಠ ವರ್ಗೀಕರಣಕ್ಕೆ ತೀರ್ಪು ನೀಡಿತು. ಈ ತೀರ್ಪನ್ನು ಪರಿಗಣಿಸಿ ರಾಜ್ಯ ಸರ್ಕಾರ ರಚಿಸಿದ ಗೌರವಾನ್ವಿತ ನ್ಯಾಯ ಮೂರ್ತಿ ನಾಗಮೋಹನ್‌ದಾಸ್ ಆಯೋಗ ವರದಿಯ ಶಿಫಾರಸ್ಸುಗಳನ್ನು ಗಣನೆಗೆ ತೆಗೆದುಕೊಳ್ಳದೆ ಸರ್ಕಾರ 'ಎ'-ಮಾದಿಗ ಮತ್ತು ಸಂಬಂಧಿತ ಶೇ.6%, 'ಬಿ' ಹೊಲೆಯ ಮತ್ತು ಸಂಬಂಧಿತ ಶೇ.6%, 'ಸಿ'- '- ಸ್ಪೃಶ್ಯ ಮತ್ತು ಜಾತಿಗಳು ಶೇ.5%, ಒಟ್ಟು ಮೀಸಲಾತಿ ಶೇ.17% ಎಂದು ವಗೀಕರಿಸಿ ವಿಧೇಯಕ ಸಹ ತಂದಿತು. ರಾಜಕೀಯ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಮಾನ್ಯ ಶ್ರೀ ಸಿದ್ದರಾಮಯ್ಯ ಮತ್ತು ಅವರ ಸರ್ಕಾರ ಗೌರವಾನ್ವಿತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಗೆ ವೈತಿರಿಕ್ತ ನಡೆಯು ಹೈಕೋರ್ಟ್ ಮೆಟ್ಟಿಲ...

ಬೆಂಗಳೂರಿನಲ್ಲಿ ನಾರಾಯಣ ಸೇವಾ ಸಂಸ್ಥಾನ ವತಿಯಿಂದ ಮಾರ್ಚ್ 1ರಂದು ಕೃತಕ ಕಾಲು ಹಾಗೂ ಕ್ಯಾಲಿಪರ್ ಅಳವಡಿಕಾ ಶಿಬಿರ ಆಯೋಜನೆ

Image
ನಾರಾಯಣ ಸೇವಾ ಸಂಸ್ಥಾನ ವತಿಯಿಂದ ಮಾರ್ಚ್ 1ರಂದು ಕೃತಕ ಕಾಲು ಹಾಗೂ ಕ್ಯಾಲಿಪರ್ ಅಳವಡಿಕಾ ಶಿಬಿರ ಆಯೋಜನೆ ಸುಮಾರು 640 ವಿಕಲಚೇತನರಿಗೆ ಕೃತಕ ಕಾಲು ಹಾಗೂ ಕ್ಯಾಲಿಪರ್ ಅಳವಡಿಕಾ ಶಿಬಿರ ಆಯೋಜನೆ ಬೆಂಗಳೂರು ಫೆಬ್ರವರಿ 27, 2026:  ದೇಶದಲ್ಲಿನ ವಿಕಲಚೇತನರಿಗೆ ಅನುಕೂಲವಾಗುವ ಉದ್ದೇಶದಿಂದ ಉದಯಪುರ ಮೂಲದ ನಾರಾಯಣ ಸೇವಾ ಸಂಸ್ಥಾನವು ನೆರವು ಒದಗಿಸುವ ಉಡುದಾರರಾದ ಜನರಲ್ ಮೋಟಾರ್ಸ್, టిటివి టెశ్నాలజిగా మత్తు ఎసిఐ వల్లోకి వ్యెడా నవతిగడఅందిన మాన్ 16 ಭಾನುವಾರದಂದು ಬೆಂಗಳೂರಿನಲ್ಲಿ ನಗೆ ಸ್ನೇಹಹಯತಕ ಕಾಲು ಮತ್ತು ಕ್ಯಾಲಿಪರ್ ಅಳವಡಿಕಾ ಶಿಬಿರ' ಹಾಗೂ ದಾನಿಗಳಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸಿದೆ. ಈ ಕಾಚಿತ ಶಿಬಿರವು ಬಸವನಗುಡಿಯ ವಿ.ವಿ. ಪುರಂನಲ್ಲಿರುವ ನ್ಯಾಷನಲ್ ಹೈಸ್ಕೂಲ್ ರಸ್ತೆಯ ಮಹಾವೀರ ಧರ್ಮಶಾಲಾ (ಸಂಖ್ಯೆ 17) ದಲ್ಲಿ ಬೆಳಿಗೆ, 8:00 ರಿಂದ ಸಂಜೆ 600 ರವರೆಗೆ ನಡೆಯಲಿದೆ. ಪೂರ್ವಾಹ್ನ 11:00 ಗಂಟೆಗೆ ಕಾರ್ಯಕ್ರಮದ ಔಪಚಾರಿಕ ಉದ್ಘಾಟನೆ ನೆರವೇರಲಿದೆ. ಈ ಹಿಂದೆ ಈ ಯೋಜನೆಗೆ ಆಯ್ಕೆಯಾದ ವಿಕಲಚೇತನರು ಮಾತ್ರ ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಈ ಶಿಬಿರದಲ್ಲಿ ಸುಮಾರು 640 ವಿಕಲಚೇತನರಿಗೆ ಉಚಿತವಾದಿ ಕೃತಕ ಕಾಲು ಮತ್ತು ಕ್ಯಾಲಿಪರ್ ಗಳನ್ನು ಅಳವಡಿಸಲಾಗುತ್ತಿದ್ದು ಇದು ಈ ಭಾಗದ ಅತಿದೊಡ್ಡ ನೆರವು ಯೋಜನೆಗಳಲ್ಲಿ ಒಂದಾಗಿದೆ. ಸುಮಾರು 550 ಫಲಾನುಭವಿಗಳಿಗೆ ಸುಧಾರಿತ ಅತ್ಯಾಧುನಿಕ 'ನಾರಾಯಣ ಕೃತ...

ಬೆಂಗಳೂರಿನ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಹಾಗೂ ಹಿರಿಯ ನಾಗರಿಕರ ಸಮಸ್ಯೆಗಳ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿತ್ತು.

Image
ಬೆಂಗಳೂರಿನ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಹಾಗೂ ಹಿರಿಯ ನಾಗರಿಕರ ಸಮಸ್ಯೆಗಳ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿತ್ತು.   ಈ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದಸಿ.ಎಸ್‌. ಷಡಾಕ್ಷರಿ ಅವರು ಉದ್ಘಾಟನೆ ಮಾಡಿದರು.  ಈ ಸಂದರ್ಭದಲ್ಲಿ 75 ವರ್ಷಕ್ಕೂ ಮೇಲ್ಪಟ್ಟ ನಿವೃತ್ತ ನೌಕರರಿಗೆ ಅಭಿನಂದನಾ ಸಮಾರಂಭ ನಡೆಯಿತು. 250 ಕ್ಕೂ ಹೆಚ್ಚು ನಿವೃತ್ತ ಸರ್ಕಾರಿ ನೌಕರರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.  ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಅಧ್ಯಕ್ಷರಾದ ಬೈರಪ್ಪ ಅವರ ನೇತೃತ್ವದಲ್ಲಿ ಈ ಸಮಾರಂಭ ನಡೆಯಿತು.

ಸಕ್ಕರೆನಾಡಲ್ಲಿ ಸಿದ್ದಗಂಗಾಶ್ರೀಗಳ ಸಸ್ಯಧಾಮ ಸದ್ದುಗದ್ದಲವಿಲ್ಲದ ಸಾಧಕ- ಪ್ರಕೃತಿಯ ಆರಾಧಕ - 'ಹಸಿರಿನ ನಾಯಕ' ಕಾಯಕಯೋಗಿ ಶಿವಕುಮಾರ್

Image
ಮಂಡ್ಯ : ಮಾಡುವಂತಿರಬೇಕು, ಮಾಡದಂತಿರಬೇಕು, ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು ಎಂಬ ಅಣ್ಣ ಬಸವಣ್ಣನವರ ವಚನದಂತೆ ಸದ್ದುಗದ್ದಲವಿರದೆ ಸಮಾಜ ಸೇವೆಯಲ್ಲಿ ನಿರತವಾಗಿರುವ ಪತ್ರಕರ್ತ ಎಂ.ಶಿವಕುಮಾರ್.   ಟೀಕೆಗಳು ಸಾಯುತ್ತವೆ ಕೆಲಸಗಳು ಮಾತ್ರ ಉಳಿಯುತ್ತವೆ ಎಂಬ ತತ್ವಕ್ಕೆ ಅಂಟಿಕೊಂಡ ಅಸಾಧ್ಯ ಸಾಧಕ.   `ಕಾಯಕವೇ ಕೈಲಾಸವೆಂಬ' ದಿವ್ಯಮಂತ್ರವನ್ನು ಆದರ್ಶವನ್ನಾಗಿಸಿಕೊಂಡು ಸದಾ ಜನೋಪಯೋಗಿ ಕಾರ್ಯದಲ್ಲಿ ನಿರತರಾಗಿರುವ ಕಾಯಕಯೋಗಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಹಿರಿಯಪತ್ರಕರ್ತ ಎಂ.ಶಿವಕುಮಾರ್ ತಮ್ಮ ಕಾಯಕದ ದುಡಿಮೆಯ ಹಣದಿಂದ ನೂರಾರು ಮಂದಿ ರೈತರಿಗೆ, ಮಹಿಳೆಯರಿಗೆ, ಸಂಘ ಸಂಸ್ಥೆಗಳಿಗೆ ಉಚಿತವಾಗಿ ಸಸಿಗಳನ್ನು ವಿತರಿಸುತ್ತಾ ಬಂದಿದ್ದಾರೆ.  ಹಸಿರೀಕರಣದ ಜಾಗೃತಿ ಮೂಡಿಸುತ್ತಿರುವ ಶಿವಕುಮಾರ್ ಅವರ ಸಾಧನೆಗೆ ಮಂಡ್ಯನಗರದ ಸ್ವರ್ಣಸಂದ್ರ ಬಡಾವಣೆಯ ಪರಮಪೂಜ್ಯ ಡಾ.ಶ್ರೀ ಶಿವಕುಮಾರಮಹಾಸ್ವಾಮೀಜಿಯವರ ಉದ್ಯಾನವನ ಹಾಗೂ ಧ್ಯಾನಕೇಂದ್ರ ಸಾಕ್ಷಿಯಾಗಿ ನಿಂತಿದೆ. ಬಿರುಬೇಸಿಗೆಯಲ್ಲೂ ಬಾಡದ ಹಸಿರು, ಮನಸ್ಸಿಗೆ ಮುದ ನೀಡುವ ಸಿದ್ದಗಂಗಾಶ್ರೀಗಳ ಧ್ಯಾನಕೇಂದ್ರ, ಪ್ರಾಣಿ ಪಕ್ಷಿಗಳಿಗೂ ನೀರಿನ ಹೊಂಡ, ಅಹ್ಲಾದಕರ ಹಾಗೂ ಪ್ರಶಾಂತ ವಾತಾವರಣ. ಹಸಿರಿನ ಉದ್ಯಾನವನ ಮಾತ್ರವಲ್ಲ ಸಿದ್ದಗಂಗಾಶ್ರೀಗಳು ನೆಲೆಸಿರುವ ದೇವರವನ ಎನ್ನುವಷ್ಟರ ಮಟ್ಟಿಗೆ ಮನೋಲ್ಲಾಸ ನೀಡುವ ನೆಮ್ಮದಿಯ ತಾಣದ ನಂದನವನ ಮಂಡ್ಯದಲ್ಲಿ...

ರಾಷ್ಟ್ರೀಯ ಔಷಧೀಯ ಸಸ್ಯ ಮಂಡಳಿಯಿಂದ ಗಾರ್ಡನ್ ಸಿಟಿ ವಿಶ್ವವಿದ್ಯಾಲಯಕ್ಕೆ ಶತಾವರಿ ಯೋಜನೆ ಮಂಜೂರು

Image
ಬೆಂಗಳೂರಿನ ಗಾರ್ಡನ್ ಸಿಟಿ ವಿಶ್ವವಿದ್ಯಾಲಯಕ್ಕೆ ರಾಷ್ಟ್ರೀಯ ಔಷಧೀಯ ಸಸ್ಯ ಮಂಡಳಿ, ಆಯುಷ್ ಸಚಿವಾಲಯ (National Medicinal Plants Board, Ministry of AYUSH) , ಭಾರತ ಸರ್ಕಾರ, ನವದೆಹಲಿ ಇವರಿಂದ “Species Specific Campaign on Shatavari – For Better Health” ಅಭಿಯಾನದಡಿ ಪ್ರತಿಷ್ಠಿತ ಶತಾವರಿ ಯೋಜನೆ ಮಂಜೂರಾಗಿದೆ. ಈ ಯೋಜನೆಗೆ ಬೆಂಗಳೂರಿನ Karnataka State Medicinal Plants Authority (KaMPA) ಬೆಂಬಲ ನೀಡುತ್ತಿದೆ. ಈ ಮಹತ್ವದ ಮಾನ್ಯತೆಯ ಭಾಗವಾಗಿ, ಶತಾವರಿ ಯೋಜನೆ ಉದ್ಘಾಟನಾ ಸಭೆ ಫೆಬ್ರವರಿ 20, 2026 ರಂದು ಜಿಸಿಯು ಆವರಣದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ KaMPAನ ಹಿರಿಯ ಸಲಹೆಗಾರರಾದ ಡಾ. ಎಂ. ಜೆ. ಪ್ರಭು ಗೌರವ ಅತಿಥಿಯಾಗಿ ಆಗಮಿಸಿದರು. ಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ಮಾನ್ಯ ಉಪಕುಲಪತಿಗಳಾದ ಡಾ. ಎಂ. ರಾಮಚಂದ್ರ ಗೌಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.  ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಉಪಕುಲಪತಿಗಳಾದ ಡಾ. ರಾಮಚಂದ್ರ ಗೌಡ ಅವರು ಶತಾವರಿ ಅಭಿಯಾನದ ಉದ್ದೇಶಗಳು ಮತ್ತು ಗುರಿಗಳನ್ನು ವಿವರಿಸಿ, ವಿಶೇಷವಾಗಿ ಗ್ರಾಮೀಣ ಸಮುದಾಯಗಳಲ್ಲಿ ಔಷಧೀಯ ಸಸ್ಯಗಳ ಮಹತ್ವವನ್ನು ಒತ್ತಿಹೇಳಿದರು. ಉದ್ಘಾಟನಾ ಸಮಾರಂಭದ ನಂತರ ಡಾ. ಎಂ. ಜೆ. ಪ್ರಭು ಅವರ ಸಂಚಾಲನೆಯಲ್ಲಿ ವಿಚಾರಗೋಷ್ಠಿ ನಡೆಯಿತು. ಪ್ಯಾನೆಲ್‌ನಲ್ಲಿ ಡಾ. ಈರಣ್ಣ ಈಶ್ವರಪ್ಪ ಹುಗಾರ್ , ಶ್ರೀಮತಿ ಸೀಮಾ ಸುಭಾಷ್ ಮಾಳಿ,...

ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘಕ್ಕೆ ನೂತನ ರಾಜ್ಯಾಧ್ಯಕ್ಷರಾಗಿ ಶ್ರೀಮತಿ ಶೈಲಾ ಕೆ.ಡಿ ಆಯ್ಕೆ

Image
ಬೆಂಗಳೂರು, ಫೆಬ್ರವರಿ 17, 2026  ಹಿಂದಿನ ರಾಜ್ಯಾಧ್ಯಕ್ಷರ ರಾಜೀನಾಮೆಯಿಂದ ತರವಾದ ಸ್ಥಾನಕ್ಕೆ ನಡೆದ ಆಯ್ಕೆಯಲ್ಲಿ ನೂತನ ರಾಜ್ಯಾಧ್ಯಕ್ಷರಾಗಿ ಶ್ರೀಮತಿ ಶೈಲಾ ಕೆ.ಡಿ. ರವರನ್ನು ಇಂದು ನಡೆದ ರಾಜ್ಯ ಪರಿಷತ್ ಸಭೆಯಲ್ಲಿ ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಇಂದಿನ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಉಪಾಧ್ಯಕ್ಷರಾದ ಶ್ರೀ ಜಿ. ನೀಲಕಂಠ ಸ್ವಾಮಿರವರು ಸುದ್ದಿ ಗೋಷ್ಠಿಯಲ್ಲಿ ಘೋಷಿಸಿದರು ದಿನಾಂಕ:28-02-2026ರಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಜರುಗುವ ರಾಜ್ಯ ಪರಿಷತ್ ಸಭೆಯಲ್ಲಿ ನೂತನ ರಾಜ್ಯಾಧ್ಯಕ್ಷರ ಪದಗ್ರಹಣದ ಕಾರ್ಯಕ್ರಮ ಮಾಡುವ ಬಗ್ಗೆ ತೀರ್ಮಾನಿಸಲಾಗಿರುವದರ ಮತ್ತು ವಿವಿದ ಬೇಡಿಕೆಗಳ ಬಗ್ಗೆ ಚರ್ಚಿಸಲು ಕರೆದಿರುವ ಮಹತ್ವದ ಸಭೆಗೆ ಸಂಘದ ಸರ್ವ ಪದಾಧಿಕಾರಿಗಳು, ನಿರ್ದೇಶಕರು ಸದಸ್ಯರುಗಳು, ಹಾಜರಾಗಲು ರಾಜ್ಯ ಜಂಟಿ ಕಾರ್ಯದಶಿಗಳಾದ ಶ್ರೀಲಾಲ್ ಸಾಬ್ ಎಂ ಮನಿಯಾರ್ ರವರು ಕರೆ ನೀಡಿದರು. ನೂತನ ರಾಜ್ಯಾಧ್ಯಕ್ಷರ ಗುರಿ ಮತ್ತು ಸವಾಲುಗಳು 1. ನೆನಗುದಿಗೆ ಬಿದ್ದಿರುವ ಪೌರಸೇವಾ ನೌಕರರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಕಳೆದ 16 ವರ್ಷಗಳು ಗತಿಸಿದ್ದರು ಸಹ ಮುನಿಸಿಪಲ್ ವೃಂದದ ಮತ್ತು ನೇಮಕಾತಿ (C& R) ತಿದ್ದು ಪಡಿ ಮಾಡವ ವಿಚಾರ 2. ಕುಟುಂಬ ಕಲ್ಯಾಣ ನಿಧಿಯಿಂದ (FBF) -GIS ಗೆ ಒಳಪಡಿಸುವುದು. 3. ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ KGID ಯನ್ನು ಮುನಿಸಿಪಲ್ ನೌಕರರಿಗೂ ಜಾರಿ...

ಬೆಂಗಳೂರಿನ ಸರ್ಕಾರಿ ಸರ್ಕಾರಿ ನೌಕರರ ಸಭಾಂಗಣ ಕ್ಲಬ್‌ ನಲ್ಲಿ "ಶೋಷಿತ ಸಮುದಾಯಗಳ ವಿಮೋಚನಾ ದಿನ" ಆಚರಣೆ ಮಾಡಲಾಯಿತು.

Image
ಬೆಂಗಳೂರಿನ ಸರ್ಕಾರಿ ಸರ್ಕಾರಿ ನೌಕರರ ಸಭಾಂಗಣ ಕ್ಲಬ್‌ ನಲ್ಲಿ "ಶೋಷಿತ ಸಮುದಾಯಗಳ ವಿಮೋಚನಾ ದಿನ" ಆಚರಣೆ ಮಾಡಲಾಯಿತು.   ಈ ಕಾರ್ಯಕ್ರಮದಲ್ಲಿ ಸಚಿವ ಎಚ್.ಸಿ.ಮಹದೇವಪ್ಪ, ಬಿ.ಕೃಷ್ಣಪ್ಪ ಟ್ರಸ್ಟ್ ಮುಖ್ಯಸ್ಥೆ ಇಂದಿರಾಕೃಷ್ಣಪ್ಪ ಅವರು ಉಪಸ್ಥಿತರಿದ್ದರು.  ದಸಂಸ ರಾಜ್ಯ ಪ್ರಧಾನ ” ಸಂಚಾಲಕ ಮಾವಳ್ಳಿ ಶಂಕರ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.  ಈ ಕಾರ್ಯಕ್ರಮದಲ್ಲಿ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿದರು. ವೈಯಕ್ತಿಕ ಜೀವನ ಎಂಬುದು ಮನುಷ್ಯನಿಗೆ ಸಹಜವಾಗಿ ಇರುವ ಮೊದಲ ಆದ್ಯತೆ. ಅದರಲ್ಲೂ ಕುಟುಂಬ ಎಂಬ ಸಮಾಜದ ಮೂಲ ಘಟಕವನ್ನು ನಿರ್ವಹಿಸುವಲ್ಲಿ ದೇಶದ ಮಹಿಳೆಯರ ಪಾತ್ರವೂ ದೊಡ್ಡದು. ಆದರೆ ದೇಶದ ಎಲ್ಲಾ ಜನರ ಬದುಕನ್ನು ಹಸನಾಗಿಸುವಲ್ಲಿ ಬಹುದೊಡ್ಡ ಪಾತ್ರ ವಹಿಸಿದ ದೇಶದ ಸಂವಿಧಾನ ಮತ್ತು ಇಲ್ಲಿನ ಶೋಷಿತರ ಬದುಕಿನ ಏಳಿಗೆಗಾಗಿ ಬಾಬಾ ಸಾಹೇಬರು ಮಾಡಿದ ಅಧ್ಯಯನ ಮತ್ತು ಪ್ರಯತ್ನಗಳ ಹಿಂದೆ ಇದ್ದವರೇ ಮಾತೆ ರಮಾ ಬಾಯಿ ಅವರು. ಅಪೌಷ್ಟಿಕತೆ, ರಕ್ತ ಹೀನತೆ ಮತ್ತು ಇನ್ನಿತರೆ ಸಮಸ್ಯೆಗಳ ಕಾರಣಕ್ಕೆ ತಮ್ಮ ಮಕ್ಕಳು ತೀರಿ ಹೋದಂತಹ ದುಃಖಕರ ಸಂದರ್ಭವನ್ನೂ ಸಹ ಗಂಡನೊಡನೆ ಹಂಚಿಕೊಳ್ಳದೇ ಎಲ್ಲರ ಬದುಕಿಗಾಗಿ ಪ್ರಯತ್ನಿಸಿ ಎಂಬ ಮಹಾನ್‌ ತ್ಯಾಗವನ್ನು ಮಾಡಿದವರು ರಮಾಬಾಯಿ ಎಂದು  ಸಚಿವ ಎಚ್.ಸಿ.ಮಹದೇವಪ್ಪ ಅವರು ತಿಳಿಸಿದರು.

Joyalukkas ‘Brilliance Diamond Jewellery Show’ in Kamanahalli from 14th February to 1st March

Image
Kamanahalli, Bengaluru February 2026: The world’s favourite jeweller, Joyalukkas, is set to dazzle Bangalore with the ‘Brilliance Diamond Jewellery Show’, from from 14th February to 1st March at Kamanahalli, Bengaluru showroom. This much-awaited exhibition promises an unforgettable celebration of craftsmanship, elegance, and innovation in diamond jewellery. From statement bridal sets to contemporary everyday sparkle, the show features pieces that marry timeless tradition with modern aesthetics. Every design is a masterpiece, available only for a limited time during the show. Dr. Joy Alukkas, Chairman & Managing Director of Joyalukkas Group, said: ‘The Brilliance Diamond Jewellery Show’ is our tribute to the enduring allure of diamonds and our passion for perfection in jewellery design. Kondapur holds a special place in our hearts, and this exhibition during the festive season will offer customers an exclusive opportunity to discover designs that reflect beauty, indi...

Lulu Group India Opens Fifth Lulu Daily store in Global Malls Divinity at Bengaluru

Image
Bengaluru, Saturday, 14 February 2026 – Lulu Group India successfully launched its fifth Lulu Daily Hypermarket in Bengaluru on Saturday, February 14, 2026, at Global Malls Divinity, Nayandahalli, Mysore Road, Bengaluru. The grand opening marked a significant milestone in the Lulu Group’s Bengaluru expansion strategy, bringing world class retail excellence to the city’s rapidly growing western corridor. Spanning 21,500 square feet, the new hypermarket witnessed an overwhelming response from the community, with thousands of shoppers thronging the store from the moment doors opened at 11:00 AM. The inaugural day saw packed aisles, festive celebrations, and an enthusiastic embrace from residents of Nagarbhavi, Nayandahalli, and surrounding neighbourhoods. The opening ceremony was graced by Mr. Ashraf Ali M. A., Executive Director, Lulu Group India along with other Lulu Group Dignitaries Mr. Ashraf Ali M. A., Executive Director, Lulu Group India, commented, ...

Each One Plant One - One Crore TREE 🌳 Plantation Drive Across Karnataka & India From 31st Jan To 5th June

Image
Each One Plant One - One Crore TREE 🌳 Plantation Drive Across Karnataka & India From 31st Jan To 5th June 165 Dhavanthari ( Navagraha) Plants Donated By Ms Bhagya Muddaiah To Be Planted Around 11 Temples Around Sira By Smt Kalayanamma, Founder Pragati Foundation.              _ALL ARE WELCOME TO JOIN US ON THIS AUSPICIOUS OCCASION SHIVARATRI. _15th Feb, 10am to 6pm. Kodi Malleshwaram. Temple, Sira Taluk, Kotta, Kere Kodi. For More Such Tree Plantation Drives Across Karnataka & India Join Our Group Of Environment Warriors.  For CSR, Corporates, NGOs, Sponsors To Be Part Of Service To Nature & Mother Earth DM Whatsapp 9740466377.*_ 🌳🇮🇳🌳🇮🇳🌳🇮🇳

ಶ್ರೀಗಂಧ ಮರಗಳ ಮಾಲ್ಕಿ ಮೌಲ್ಯ ಅವೈಜ್ಞಾನಿಕವಾಗಿ ನಿಗದಿಗೆ ಶ್ರೀ ಗಂಧ ರೈತರ ವಿರೋಧ.

Image
ಬೆಂಗಳೂರು ಫೆಬ್ರವರಿ 13, 2026:  ಶ್ರೀಗಂಧ ಮರಗಳ ಮಾಲ್ಕಿ ಮೌಲ್ಯವನ್ನು ಅವೈಜ್ಞಾನಿಕವಾಗಿ ನಿಗದಿಪಡಿಸಿರುವುದು ಸರಿಯಲ್ಲ, ಮೌಲ್ಯ ನಿರ್ಧರಣೆಯಲ್ಲಿ ರೈತರಿಗೆ ತಾರತಮ್ಯ ಮಾಡಲಾಗಿದ್ದು ಅನೇಕ ವರ್ಷಗಳ ಕಾಲ ಶೋಷಣೆ ಮಾಡಿರುವುದರ ಕುರಿತು ಸಿ ಬಿ ಐ ತನಿಖೆ ನಡೆಸಬೇಕೆಂದು ಅಖಿಲ ಕರ್ನಾಟಕ ಶ್ರೀ ಗಂಧ ಮತ್ತು ವನಕೃಷಿ ಬೆಳಗಾರರ ಸಂಘ ಆಗ್ರಹಿಸಿದೆ. ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರಾದ ನಿವೃತ್ತ ಐಎಎಸ್ ಅಧಿಕಾರಿ ಕೆ.ಅಮರ ನಾರಾಯಣ,ಕೇಂದ್ರ ಸರ್ಕಾರ ಹೊರಡಿಸಿರುವ ಶ್ರೀಗಂಧ ಅಭಿವೃದ್ಧಿ ಸಮಿತಿಯ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರುವುದು ಶ್ರೀಗಂಧ ಮರವನ್ನು ಕೃಷಿ ಉತ್ಪನ್ನವೆಂದು ಘೋಷಿಸಿರುವುದರಿಂದ ಶ್ರೀಗಂಧ ಬೆಳೆಯ ಸಮರ್ಥ ನಿರ್ವಹಣೆಗೆ ತೋಟಗಾರಿಕೆ ಇಲಾಖೆಗೆ ವಹಿಸುವುದು, ತೋಟಗಾರಿಕೆ ಇಲಾಖೆ ಮುಖಾಂತರ ವೈಜ್ಞಾನಿಕವಾಗಿ ಶ್ರೀಗಂಧ ಮರಗಳಿಗೆ ಮಾಲ್ಕಿ ದರ ನಿಗದಿಪಡಿಸಬೇಕು,ಮಾರ್ಚ್ 31ರೊಳಗೆ ಸಂಘದ ಬೇಡಿಕೆಗಳನ್ನು ಈಡೇರಿಸಬೇಕು ತಪ್ಪಿದಲ್ಲಿ ಶ್ರೀಗಂಧ ಬೆಳೆಗಾರರು ಅರಣ್ಯ ಇಲಾಖೆಯ ಯಾವುದೇ ನಿಯಮ ಮತ್ತು ಆದೇಶಗಳನ್ನು ಧಿಕ್ಕರಿಸಿ, ತಮ್ಮ ಉತ್ಪನ್ನಗಳನ್ನು ತಾವೇ ಸ್ವತಂತ್ರವಾಗಿ ಇತರೆ ಕೃಷಿ ಬೆಳೆಗಳಂತೆ ನಿಭಾಯಿಸಲು ಕ್ರಮ ವಹಿಸಬೇಕು ಎಂದು ಹೇಳಿದರು. ಮಾಫಿಯಾ ಮುಖಾಂತರ ವ್ಯವಸ್ಥಿತವಾಗಿ ನಡೆಯುತ್ತಿರುವ ಶ್ರೀಗಂಧ ಮರಗಳ ಕಳ್ಳತನಗಳ ಬಗ್ಗೆ, ರಾಜ್ಯ ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ಮ...

ಫೆಬ್ರವರಿ 12 ರಂದು ದೆಹಲಿ ಮಹಾಬೋಧಿ ಮುಕ್ತಿವಿಹಾರ ಆಂದೋಲನ; ರಾಜ್ಯದಿಂದ 10ಸಾವಿರ ಜನ ಭಾಗಿ

Image
ಬೆಂಗಳೂರು ಫೆಬ್ರವರಿ 6, 2026:  ಫೆಬ್ರವರಿ 12 ರಂದು ದೆಹಲಿ ಚಲೋ ಜಂತರ ಮಂಥರ್ ಮತ್ತು ರಾಮಲೀಲಾ ಮೈದಾನದಲ್ಲಿ ಜರುಗಲಿರುವ ಮಿಷನ್ ಮಹಾಭೋಧಿ ಮಹಾವಿಹಾರ ಮುಕ್ತಿ ಆಂದೋಲನ ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಮಿಷನ್ ಮಹಾಬೋಧಿ ಮುಕ್ತಿ ಆಂದೋಲನದಲ್ಲಿ ಬಾಗವಹಿಸಲು ಬೀದರ ರೈಲ್ವೆ ನಿಲ್ದಾಣದಿಂದ 1,300 ಜನ ಪ್ರಯಾಣಿಸುತ್ತಿದ್ದು ಒಟ್ಟಾರೆಯಾಗಿ ಕರ್ನಾಟಕದಿಂದ 10 ಸಾವಿರ ಜನ ಬಾಗವಹಿಸಲಿದ್ದಾರೆ ನಳಂದ ಉಪಾಸಿಕಾ ಮತ್ತು ಉಪಾಸಕಾ ಚಾರಿಟೇಬಲ್ ಟ್ರಸ್ಟ್ ನ ಭಂತೆ ಬೋಧಿದತ್ತ ಥೇರ ತಿಳಿಸಿದರು  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕಂದಾಚಾರ ಕರ್ಗತ್ತಲಿನಿಂದ ತುಂಬಿದ ವಿಶ್ವಕ್ಕೆ ಶಾಂತಿ, ಪ್ರೀತಿ, ಕರುಣೆ, ಬೇಳಕನ್ನು ನೀಡಿದ ಭಗವಾನ್ ಬುದ್ಧರ ಸ್ಥಳ, ಮತ್ತು ಸಾಮ್ರಾಟ್ ಅಶೋಕರು ನಿರ್ಮಿಸಿದ ವಿಶ್ವಖ್ಯಾತಿ ಮಹಾಸ್ತೂಪದ ಪಾವನ ಸ್ಥಳ, ಜಗತ್ತಿನ ಬೌದ್ಧರ ಪವಿತ್ರ ಕ್ಷೆ ತ್ರವಾದ ಬುದ್ಧಗಯಾದ ಮಹಾಬೋಧಿ, ಮಹಾವಿಹಾರದ ಆಡಳಿತ ಸಂಪೂರ್ಣವಾಗಿ ಬೌದ್ಧರಿಗೆ ನೀಡದೆ ಬೋಧಗಯಾ ಟೆಂಪಲ್ ಆಕ್ಟ್ 1949 ಎಂಬ ಅಸಂವಿಧಾನಿಕ ಕಾನೂನು ಮೂಲಕ ಹಿಂದುಗಳ ನಿಯಂತ್ರಣಕ್ಕೆ ನೀಡಿ ಅನ್ಯಾಯ ಮಾಡಲಾಗಿದೆ.ಸ್ವಾತಂತ್ರ್ಯ ಪೂರ್ವಾದಿಂದ ನಡೆದ ಈ ಹೋರಾಟಕ್ಕೆ ಇನ್ನೂ ಜಯ ಸಿಕ್ಕಿಲ್ಲ. ಸಂವಿಧಾನದ ಕಲಂ 13, 25,26, 2 29 50ಅನುಷ್ಠಾನಕ್ಕಾಗಿ ಬಿಟಿ ಆ್ಯಕ್ಟ್ 1949 ರದ್ದುಗೊಳಿಸಿ ಬುದ್ಧ ಗಯಾದ ಮಹಾಬೋಧಿ, ಮಹಾವಿಹಾರದ ಆಡಳಿತ ಸಂಪೂರ್ಣವಾಗಿ ಬೌದ್ಧರಿಗೆ ಒಪ್ಪಿಸಬೇಕು ಎಂದು...

ಬೈಕ್ ಟ್ಯಾಕ್ಸಿ ವಿರುದ್ದ ಮೋದಿಗೊಂದು ಪತ್ರ ಚಳುವಳಿ

Image
ಬೆಂಗಳೂರು, ಫೆಬ್ರವರಿ 6, 2026:  ಬೈಕ್ ಟ್ಯಾಕ್ಸಿಯಿಂದ ಆಟೋ, ಕಾರ್ ಹಾಗೂ ಗುಡ್ಸ್ ವಾಹನದ ಚಾಲಕರಿಗೆ ತೊಂದರೆ ಯಾಗುತ್ತಿದ್ದೂ*ಇಂಡಿಯನ್ ವೆಹಿಕಲ್ಸ್ ಡ್ರೈವರ್ ಟ್ರೇಡ್ ಯೂನಿಯನ್* ಹಾಗೂ *ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್* ಗಳು ತಕ್ಷಣ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಿವೆ. ಮೋಟಾರ್ ವಾಹನಗಳ ಕಾಯ್ದೆ, 1988ರಲ್ಲಿ “ಬೈಕ್ ಟ್ಯಾಕ್ಸಿ”ಗೆ ಯಾವುದೇ ಸ್ಪಷ್ಟ ಹಾಗೂ ನೇರ ಅನುಮತಿ ಇಲ್ಲ. ಸುರಕ್ಷತಾ ವ್ಯವಸ್ಥೆಗಳಿಲ್ಲದ ದ್ವಿಚಕ್ರ ವಾಹನಗಳನ್ನು ವಾಣಿಜ್ಯ ಪ್ರಯಾಣಿಕರ ಸಾರಿಗೆಗೆ ಬಳಸುವುದು ಸಾರ್ವಜನಿಕ ಜೀವಭದ್ರತೆಗೆ ಗಂಭೀರ ಅಪಾಯಕಾರಿಯಾಗಿದೆ ಎಂದು ಚಾಲಕರ ಸಂಘಟನೆ ಗಳು ತಿಳಿಸಿದ್ದಾವೆ. ಅಪಘಾತ ಅಂಕಿ ಅಂಶಗಳನ್ನೇ ಗಮನಿಸಿದರೂ, ಬೈಕ್‌ ಟ್ಯಾಕ್ಸಿ ಗಳಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚು ಎನ್ನುವುದು ಸ್ಪಷ್ಟವಾಗಿದೆ. ಪರವಾನಗಿ ಪಡೆಯುವುದು ಮೂಲಭೂತ ಹಕ್ಕು ಅಲ್ಲ ಎಂಬುದನ್ನು ಮಾನ್ಯ ಸುಪ್ರೀಂ ಕೋರ್ಟ್ ಹಲವು ತೀರ್ಪುಗಳಲ್ಲಿ ಸ್ಪಷ್ಟಪಡಿಸಿದ್ದು, ಸಾರ್ವಜನಿಕ ಹಿತಾಸಕ್ತಿಗಾಗಿ ಸಾರಿಗೆ ವ್ಯವಸ್ಥೆಯನ್ನು ನಿಯಂತ್ರಿಸುವ ಸಂಪೂರ್ಣ ಅಧಿಕಾರ ರಾಜ್ಯ ಸರ್ಕಾರಕ್ಕಿದೆ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ. ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡುವುದರಿಂದ ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ಉಂಟಾಗುವುದರ ಜೊತೆಗೆ, ರಸ್ತೆ ಅಪಘಾತಗಳ ಪ್ರಮಾಣ ಹೆಚ್ಚಳವಾಗುವ ಭೀತಿ ಇದೆ. ಅಲ್ಲದೆ, ನಿಯಮಾನುಸಾರ ಪರವಾನಗಿ ಪಡೆದು ತೆರಿಗೆ...

ಫೆರಿಪೆರಲ್ ರಿಂಗ್ ರಸ್ತೆ ನಿರ್ಮಾಣ; ಬಿಡಿಎನಿಂದ ಪರಿಹಾರ ವಿಳಂಬ;ರಾಜ್ಯ ರೈತ ಸಂಘ,ಹಸಿರು ಸೇನೆ ಆರೋಪ.

Image
ಬೆಂಗಳೂರು ಫೆಬ್ರವರಿ 5, 2026: ಫೆರಿಪೆರಲ್ ರಿಂಗ್ ರಸ್ತೆ ಯನ್ನು ನಿರ್ಮಿಸಲು ಬಿಡಿಎ ಸಂಸ್ಥೆಯ ಮುಖಾಂತರ ರೈತರ ಜಮೀನುಗಳಿಗೆ ನೋಟಿಸ್ ನೀಡಿ 20 ವರ್ಷಗಳು ಕಳೆದಿದ್ದು ಇದುವರೆಗೆ ಪರಿಹಾರವನ್ನು ನೀಡಿಲ್ಲ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ರಾಜ್ಯ ರೈತ ಸಂಘ ಮತ್ತು ಹಸಿರು ದಳ ಆರೋಪಿಸಿದೆ.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ರೈತರು ಹಾಗೂ ಭೂಮಾಲೀಕರಾದ ನಾವು ಸಹ ಈ ಬೆಂಗಳೂರಿನ ಅಭಿವೃದ್ಧಿಗೆ ನಿರೀಕ್ಷಿಸಿ ಇದುವರೆಗೂ ಸಹಕರಿಸಿದ್ದೇವೆ, ಸರ್ಕಾರದ ಮೇಲೆ ಭರವಸೆಯಿಟ್ಟು ನಾವು ನ್ಯಾಯಯುತ ಪರಿಹಾರಕ್ಕಾಗಿ ಕಾಯುತ್ತಿದ್ದು, 2013ರ ಭೂ ಸ್ವಾದೀನ ಹಾಗೂ ಪುನರ್ವಸತಿ ಕಾಯ್ದೆಯಡಿ ಪರಿಹಾರ ನೀಡಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಿದ್ದು ಅದನ್ನು ಕಡೆಗಣಿಸಿ ಸರಕಾರವು ಯೋಜನೆಯನ್ನು ಪ್ರಾರಂಭ ಮಾಡಲು ವಾಮ ಮಾರ್ಗದಲ್ಲಿ ಹೊಸ ಸ್ಟ್ರೀಮ್ ನಡಿಯಲ್ಲಿ ಸಚಿವಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡಿರುವುದು ರೈತರಿಗೆ ಮಾಡಿದ ವಂಚನೆಯಾಗಿದೆ ಎಂದು ಹೇಳಿದರು. ಫೆರಿಪೆರಲ್ ಯೋಜನೆಗೆ ಜಮೀನು ಕೊಡಲು ಸಿದ್ಧರಿದ್ದೇವೆ, ನಮಗೆ ನ್ಯಾಯವಾದ ಪರಿಹಾರ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ,ರಾಜ್ಯ ಸರ್ಕಾರ ಇದನ್ನು ಪುನ‌ರ್ ಪರಿಶೀಲನೆ ಮಾಡಿ ಬಿಡಿಎ ಸಂಸ್ಥೆ 2015ರಲ್ಲಿಉಚ್ಚ ನ್ಯಾಯಾಲದಲ್ಲಿ ಪ್ರಕರಣಗಳು ನಡೆಯುವ ಸಂದರ್ಭದಲ್ಲಿ 2013 ರ ಕಾಯ್ದೆಯಂತೆ ಪರಿಹಾರ ನೀಡುತ್ತೇವೆಂದು ಅಫಿಡವಿಟ್‌ ನಲ್ಲಿ ಘೋಷಿಸಿದ...

ಫೆರಿಪೆರಲ್ ರಿಂಗ್ ರಸ್ತೆ ನಿರ್ಮಾಣ; ಬಿಡಿಎನಿಂದ ಪರಿಹಾರ ವಿಳಂಬ;ರಾಜ್ಯ ರೈತ ಸಂಘ,ಹಸಿರು ಸೇನೆ ಆರೋಪ.

Image
ಬೆಂಗಳೂರು ಫೆಬ್ರವರಿ 6, 2026: ಫೆರಿಪೆರಲ್ ರಿಂಗ್ ರಸ್ತೆ ಯನ್ನು ನಿರ್ಮಿಸಲು ಬಿಡಿಎ ಸಂಸ್ಥೆಯ ಮುಖಾಂತರ ರೈತರ ಜಮೀನುಗಳಿಗೆ ನೋಟಿಸ್ ನೀಡಿ 20 ವರ್ಷಗಳು ಕಳೆದಿದ್ದು ಇದುವರೆಗೆ ಪರಿಹಾರವನ್ನು ನೀಡಿಲ್ಲ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ರಾಜ್ಯ ರೈತ ಸಂಘ ಮತ್ತು ಹಸಿರು ದಳ ಆರೋಪಿಸಿದೆ.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ರೈತರು ಹಾಗೂ ಭೂಮಾಲೀಕರಾದ ನಾವು ಸಹ ಈ ಬೆಂಗಳೂರಿನ ಅಭಿವೃದ್ಧಿಗೆ ನಿರೀಕ್ಷಿಸಿ ಇದುವರೆಗೂ ಸಹಕರಿಸಿದ್ದೇವೆ, ಸರ್ಕಾರದ ಮೇಲೆ ಭರವಸೆಯಿಟ್ಟು ನಾವು ನ್ಯಾಯಯುತ ಪರಿಹಾರಕ್ಕಾಗಿ ಕಾಯುತ್ತಿದ್ದು, 2013ರ ಭೂ ಸ್ವಾದೀನ ಹಾಗೂ ಪುನರ್ವಸತಿ ಕಾಯ್ದೆಯಡಿ ಪರಿಹಾರ ನೀಡಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಿದ್ದು ಅದನ್ನು ಕಡೆಗಣಿಸಿ ಸರಕಾರವು ಯೋಜನೆಯನ್ನು ಪ್ರಾರಂಭ ಮಾಡಲು ವಾಮ ಮಾರ್ಗದಲ್ಲಿ ಹೊಸ ಸ್ಟ್ರೀಮ್ ನಡಿಯಲ್ಲಿ ಸಚಿವಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡಿರುವುದು ರೈತರಿಗೆ ಮಾಡಿದ ವಂಚನೆಯಾಗಿದೆ ಎಂದು ಹೇಳಿದರು. ಫೆರಿಪೆರಲ್ ಯೋಜನೆಗೆ ಜಮೀನು ಕೊಡಲು ಸಿದ್ಧರಿದ್ದೇವೆ, ನಮಗೆ ನ್ಯಾಯವಾದ ಪರಿಹಾರ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ,ರಾಜ್ಯ ಸರ್ಕಾರ ಇದನ್ನು ಪುನ‌ರ್ ಪರಿಶೀಲನೆ ಮಾಡಿ ಬಿಡಿಎ ಸಂಸ್ಥೆ 2015ರಲ್ಲಿಉಚ್ಚ ನ್ಯಾಯಾಲದಲ್ಲಿ ಪ್ರಕರಣಗಳು ನಡೆಯುವ ಸಂದರ್ಭದಲ್ಲಿ 2013 ರ ಕಾಯ್ದೆಯಂತೆ ಪರಿಹಾರ ನೀಡುತ್ತೇವೆಂದು ಅಫಿಡವಿಟ್‌ ನಲ್ಲಿ ಘೋಷಿಸಿದ...

ಫೆಬ್ರವರಿ 6,7 ಮತ್ತು 8ರಂದು ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ 'ಅಂತರರಾಷ್ಟ್ರೀಯ ವ್ಯಾಣಿಜ್ಯ ಮೇಳ' ಆಯೋಜನೆ

Image
ಬೆಂಗಳೂರು ಫೆಬ್ರವರಿ 4,2026:  ರೈತರನ್ನು ಕೃಷಿ ಉದ್ಯಮಿಗಳಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ,ಕೃಷಿ - ರೈತರ ಸಬಲೀಕರಣ" ಎಂಬ ವಿಶಿಷ್ಟ ಪರಿಕಲ್ಪನೆಯಡಿ "ಅಂತರರಾಷ್ಟ್ರೀಯ ವ್ಯಾಣಿಜ್ಯ ಮೇಳ 2026 ಇದೇ 6,7 ಮತ್ತು 8ರಂದು ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆಯೋಜಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಕೃಷಿ ಸಚಿವ ಎಂ.ಚೆಲುವರಾಯ ಸ್ವಾಮಿ, ಈ ವ್ಯಾಣಿಜ್ಯ ಮೇಳವನ್ನು ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಕೃಷಿ-ಪರಿಸರ ವಿಜ್ಞಾನ, ಬ್ಯಾಂಡಿಂಗ್ ಮತ್ತು ಸಾಲ ಸೌಲಭ್ಯ ಎಂಬ ಪ್ರಮುಖ ಉಪಕಲ್ಪನೆಗಳ ಮೇಲೆ ಕೇಂದ್ರೀಕರಿಸಲಿದೆ. ಸಣ್ಣ ಮಟ್ಟದ ಆಹಾರ ಸಂಸ್ಕರಣೆದಾರರು, ರೈತ ಗುಂಪುಗಳು, ಸ್ವಸಹಾಯ ಗುಂಪುಗಳು ಹಾಗೂ ರೈತ ಉತ್ಪಾದಕ ಸಂಸ್ಥೆಗಳ ನಡುವೆ ಜಾಗೃತಿ ಮೂಡಿಸುವುದು ಮತ್ತು ಸಂಸ್ಕರಣೆ ಹಾಗೂ ಮೌಲ್ಯವರ್ಧನಾ ಉಪಕ್ರಮಗಳ ಪ್ರೋತ್ಸಾಹದ ಮೂಲಕ ರಾಜ್ಯದ ರೈತರನ್ನು ಉದ್ಯಮಿಗಳಾಗಿ ರೂಪಿಸುವುದಕ್ಕೆ ಸೂಕ್ತ ವೇದಿಕೆಯನ್ನು ಒದಗಿಸುವುದೇ ಪ್ರಧಾನ ಉದ್ದೇಶವಾಗಿದೆ ಎಂದರು.   ಈ ಸಮ್ಮೇಳನದಲ್ಲಿ ಜರ್ಮನಿ, ಅಮೇರಿಕಾ, ವಿಯೆಟ್ನಾಂ, ಕಾಂಬೋಡಿಯಾ ದೇಶಗಳ ಪ್ರತಿನಿಧಿಗಳು ಸೇರಿದಂತೆ 10 ಕ್ಕಿಂತ ಹೆಚ್ಚು ಅಂತರರಾಷ್ಟ್ರೀಯ ಮತ್ತು 35 ಕ್ಕಿಂತಲೂ ಹೆಚ್ಚು ರಾಷ್ಟ್ರೀಯ ಪ್ರಖ್ಯಾತ ಉಪನ್ಯಾಸಕರು ಸೇರಿದಂತೆ ಒಟ್ಟು 45 ತಜ್ಞರು ಹಾಗೂ ವೃತ್ತಿಪರರು ಮಾಹಿತಿ ನೀಡಲಿದ್ದಾರೆ.ಸಮ್ಮೇಳನದಲ್ಲಿ ಸರ್ಕಾರಿ ಇಲಾಖೆಗಳು, ಸಂಶೋಧನಾ ಹಾಗ...

ಮಾಲೂರಿನ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸಚಿವರೊಂದಿಗೆ ಚರ್ಚೆ ನಡೆಸಿದ ಹೂಡಿ ವಿಜಯ್ ಕುಮಾರ್

Image
ನವದೆಹಲಿ, ಫೆಬ್ರವರಿ 5, 2026: ನವದೆಹಲಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು, ಜೆ.ಡಿ.ಎಸ್. ರಾಜ್ಯಾಧ್ಯಕ್ಷರು ಹಾಗೂ ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾದ ಸನ್ಮಾನ್ಯ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ನಮ್ಮ ಮಾಲೂರು ತಾಲೂಕಿನ ಮುಖಂಡರ ತಂಡದೊಂದಿಗೆ ಭೇಟಿ ಮಾಡಿ, ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಪ್ರಚಲಿತ ರಾಜಕೀಯ ವಿದ್ಯಾಮಾನಗಳ ಕುರಿತು ಹೂಡಿ ವಿಜಯ್ ಕುಮಾರ್ ಅವರು ಸುದೀರ್ಘವಾಗಿ ಚರ್ಚಿ ನಡೆಸಿದರು. ಈ ಸಂದರ್ಭದಲ್ಲಿ ನಮ್ಮ ಮಾಲೂರು ತಾಲೂಕಿನ ಮೂಲಭೂತ ಸೌಕರ್ಯಗಳು, ಕೃಷಿ ಮತ್ತು ಕೈಗಾರಿಕಾ ವಲಯದ ಪ್ರಗತಿ ಹಾಗೂ ಸ್ಥಳೀಯರ ಉದ್ಯೋಗಾವಕಾಶಗಳ ಬಗ್ಗೆ ಸಚಿವರ ಗಮನ ಸೆಳೆದೆನು. ಕ್ಷೇತ್ರದ ಪ್ರತಿಯೊಬ್ಬ ನಾಗರಿಕನ ಧ್ವನಿಯಾಗಿ, ಇಲ್ಲಿನ ಜನರ ಆಶೋತ್ತರಗಳನ್ನು ಈಡೇರಿಸಲು ಬೇಕಾದ ಪೂರಕ ರಾಜಕೀಯ ನಿರ್ಧಾರಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಮಾಲೂರಿನ ಹಿತಾಸಕ್ತಿ ಕಾಪಾಡುವಲ್ಲಿ ಮತ್ತು ಸ್ಥಳೀಯ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಾದೇಶಿಕ ನಾಯಕತ್ವದ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ ಎಂದು ನಾನು ಈ ವೇಳೆ ಮನವರಿಕೆ ಮಾಡಿಕೊಟ್ಟರು.  ಈ ಮಹತ್ವದ ಭೇಟಿಯಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾದ ಶ್ರೀ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಶ್ರೀ ಜಿ.ಕೆ. ಕೃಷ್ಣಾರೆಡ್ಡಿ ಹಾಗೂ ಸಂಸದರಾದ ಶ್ರೀ ಮಲ್ಲೇಶ್ ಬಾಬು, ಶ್ರೀ ಜಿ.ಇ. ರಾಮೇಗೌಡರು ಅವರೊಂದಿಗೆ ಮಾಲೂರಿನ ಭ...

ಮಾಲೂರಿನ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸಚಿವರೊಂದಿಗೆ ಚರ್ಚೆ ನಡೆಸಿದ ಹೂಡಿ ವಿಜಯ್ ಕುಮಾರ್

Image
ನವದೆಹಲಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು, ಜೆ.ಡಿ.ಎಸ್. ರಾಜ್ಯಾಧ್ಯಕ್ಷರು ಹಾಗೂ ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾದ ಸನ್ಮಾನ್ಯ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ನಮ್ಮ ಮಾಲೂರು ತಾಲೂಕಿನ ಮುಖಂಡರ ತಂಡದೊಂದಿಗೆ ಭೇಟಿ ಮಾಡಿ, ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಪ್ರಚಲಿತ ರಾಜಕೀಯ ವಿದ್ಯಾಮಾನಗಳ ಕುರಿತು ಹೂಡಿ ವಿಜಯ್ ಕುಮಾರ್ ಅವರು ಸುದೀರ್ಘವಾಗಿ ಚರ್ಚಿ ನಡೆಸಿದರು. ಈ ಸಂದರ್ಭದಲ್ಲಿ ನಮ್ಮ ಮಾಲೂರು ತಾಲೂಕಿನ ಮೂಲಭೂತ ಸೌಕರ್ಯಗಳು, ಕೃಷಿ ಮತ್ತು ಕೈಗಾರಿಕಾ ವಲಯದ ಪ್ರಗತಿ ಹಾಗೂ ಸ್ಥಳೀಯರ ಉದ್ಯೋಗಾವಕಾಶಗಳ ಬಗ್ಗೆ ಸಚಿವರ ಗಮನ ಸೆಳೆದೆನು. ಕ್ಷೇತ್ರದ ಪ್ರತಿಯೊಬ್ಬ ನಾಗರಿಕನ ಧ್ವನಿಯಾಗಿ, ಇಲ್ಲಿನ ಜನರ ಆಶೋತ್ತರಗಳನ್ನು ಈಡೇರಿಸಲು ಬೇಕಾದ ಪೂರಕ ರಾಜಕೀಯ ನಿರ್ಧಾರಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಮಾಲೂರಿನ ಹಿತಾಸಕ್ತಿ ಕಾಪಾಡುವಲ್ಲಿ ಮತ್ತು ಸ್ಥಳೀಯ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಾದೇಶಿಕ ನಾಯಕತ್ವದ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ ಎಂದು ನಾನು ಈ ವೇಳೆ ಮನವರಿಕೆ ಮಾಡಿಕೊಟ್ಟರು.  ಈ ಮಹತ್ವದ ಭೇಟಿಯಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾದ ಶ್ರೀ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಶ್ರೀ ಜಿ.ಕೆ. ಕೃಷ್ಣಾರೆಡ್ಡಿ ಹಾಗೂ ಸಂಸದರಾದ ಶ್ರೀ ಮಲ್ಲೇಶ್ ಬಾಬು, ಶ್ರೀ ಜಿ.ಇ. ರಾಮೇಗೌಡರು ಅವರೊಂದಿಗೆ ಮಾಲೂರಿನ ಭವಿಷ್ಯದ ರಾಜಕೀಯ ಬ...

ಗೆಲ್ಲುವ ಹಾದಿ 'ಶೂನ್ಯ'ದಿಂದ ಆರಂಭವಾಗುತ್ತದೆ: ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಅಪೋಲೋ ಕ್ಯಾನ್ಸರ್ ಸೆಂಟರ್ ನಿಂದ 'ಜೀರೋ ಟು ಹೀರೋ' ಅಭಿಯಾನಕ್ಕೆ ಚಾಲನೆ

Image
ಬೆಂಗಳೂರು, 04 ಫೆಬ್ರವರಿ 2026: 'ವಿಶ್ವ ಕ್ಯಾನ್ಸರ್ ದಿನ'ದ (ಫೆಬ್ರವರಿ 4, 2026) ಅಂಗವಾಗಿ ಅಪೋಲೋ ಕ್ಯಾನ್ಸರ್ ಸೆಂಟರ್ ತನ್ನ ಹೊಸ ‘ಜೀರೋ ಟು ಹೀರೋ’ ಅಭಿಯಾನವನ್ನು ಪ್ರಾರಂಭಿಸಿದೆ. ಕ್ಯಾನ್ಸರ್ ಅನ್ನು 'ಶೂನ್ಯ ಹಂತ'ದಲ್ಲೇ ಪತ್ತೆಹಚ್ಚುವ ಮೂಲಕ, ರೋಗಿಗಳು ಗುಣಮುಖರಾಗುವ ಸಾಧ್ಯತೆಗಳನ್ನು ಹೆಚ್ಚಿಸುವ ಮತ್ತು ಉತ್ತಮ ಜೀವನ ಲಭಿಸುವಂತೆ ಮಾಡುವ ಉದ್ದೇಶ ಸಾಕಾರಕ್ಕಾಗಿ ಈ ಅಭಿಯಾನವನ್ನು ಆರಂಭಿಸಲಾಗಿದೆ. ಸಂಸತ್ತಿನಲ್ಲಿ ಮಂಡಿಸಲಾದ ಐಸಿಎಂಆರ್- ಎನ್ ಸಿ ಆರ್ ಪಿ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳು ತೀವ್ರವಾಗಿ ಏರುತ್ತಿವೆ. 2024ರಲ್ಲಿ 15 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿದ್ದು, ಪ್ರತಿ ವರ್ಷ ಈ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂದು ಪ್ರತಿ ಒಂಬತ್ತು ಭಾರತೀಯರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಕ್ಯಾನ್ಸರ್ ಅಪಾಯವನ್ನು ಎದುರಿಸುತ್ತಿದ್ದು, ಇದು ಸಾರ್ವಜನಿಕ ಆರೋಗ್ಯದ ಗಂಭೀರ ಕಳವಳವಾಗಿ ಹೊರಹೊಮ್ಮಿದೆ. ಆದರೂ, ಶೇ. 70ಕ್ಕಿಂತ ಹೆಚ್ಚು ಪ್ರಕರಣಗಳು ತಡವಾದ ಹಂತಗಳಲ್ಲಿ (ಹಂತ III/ IV) ಮಾತ್ರ ಪತ್ತೆಯಾಗುತ್ತಿವೆ. ಈ ಹಂತದಲ್ಲಿ ಚಿಕಿತ್ಸೆ ಕಠಿಣವಾಗಿರುತ್ತದೆ, ಗುಣಮುಖರಾಗುವ ಸಾಧ್ಯತೆ ಕಡಿಮೆ ಇರುತ್ತದೆ ಮತ್ತು ಕುಟುಂಬಗಳ ಮೇಲಿನ ಆರ್ಥಿಕ ಹೊರೆ ಗಣನೀಯವಾಗಿ ಹೆಚ್ಚಿರುತ್ತದೆ. ಈ ಆತಂಕಕಾರಿ ಬೆಳವಣಿಗೆಗಳಿಗೆ ಪ್ರತಿಕ್ರಿಯೆಯಾಗಿ, ಅಪೋಲೋ ಕ್ಯಾನ್ಸರ್ ಸೆಂಟರ್ ನ(ಎಸಿಸಿ)...

'ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ' ಪದಾಧಿಕಾರಿಗಳಿಂದ ಪತ್ರಿಕಾಗೋಷ್ಠಿ

Image
ಬೆಂಗಳೂರು ನಗರದ ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳಲ್ಲಿ ಒಂದಾದ ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ಸುಮಾರು 11 ಸಾವಿರ ಸದಸ್ಯರೊಂದಿಗೆ ರೂ. 26 ಕೋಟಿ ಷೇರು ಬಂಡವಾಳ ಹೊಂದಿದೆ. ಜನವರಿ 2026ರ ಅಂತ್ಯಕ್ಕೆ ಬ್ಯಾಂಕಿನ ಠೇವಣಿ ರೂ.478 ಕೋಟಿಗಳಷ್ಟಿದ್ದು, ರೂ.336 ಕೋಟಿ ಸಾಲ ವಿತರಿಸಲಾಗಿದೆ. ಬ್ಯಾಂಕಿನ ಒಟ್ಟು ಹೂಡಿಕೆಗಳು ರೂ. 204 ಕೋಟಿಗಳಷ್ಟಿದ್ದು, ಇದರಲ್ಲಿ ಶೇ.68% ರಷ್ಟನ್ನು ಸರ್ಕಾರಿ ಹೂಡಿಕೆಗಳಲ್ಲಿ ತೊಡಗಿಸಲಾಗಿದೆ. ಬ್ಯಾಂಕಿನ ಒಟ್ಟಾರೆ ರೂ.814 ಕೋಟಿಗಳಷ್ಟು ವ್ಯವಹಾರ ಹೊಂದಿದೆ ಹಾಗೂ 2024-25 ನೇ ಸಾಲಿನಲ್ಲಿ ರೂ.8.07 ಕೋಟಿಗಳ ನಿವ್ವಳ ಲಾಭಗಳಿಸಿದೆ. ಮಾರ್ಚ್ 2025ರ ಅಂತ್ಯಕ್ಕೆ ಬ್ಯಾಂಕಿನ ಒಟ್ಟು ಅನುತ್ಪಾದಕ ಆಸ್ತಿಯ ಪ್ರಮಾಣ ಶೇ.1.25 ರಷ್ಟಿದ್ದು (Gross NPA) ಹಾಗೂ ಸತತ ಮೂರು ವರ್ಷಗಳಿಂದ ಶೂನ್ಯ ನಿವ್ವಳ ನಿಷ್ಕ್ರಿಯ ಆಸ್ತಿಗಳನ್ನು (Net NPA) ಹೊಂದಿದೆ. motor, Phonepay, Google pry, POS ಇ- ಕಾಮರ್ಸ್‌ಗಳೊಂದಿಗೆ ಎಲ್ಲಾ ರೀತಿಯ ಡಿಜಿಟಲ್ ಪೇಮೆಂಟ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅಲ್ಲದೇ ಬ್ಯಾಂಕ್ RTGS/NEFT, ATM ಕಾರ್ಡ್, ಲಾಕರ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ರಾಜ್ಯದ ಪ್ರಮುಖ ಪಟ್ಟಣ ಸಹಕಾರಿ ಬ್ಯಾಂಕುಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಆಡಳಿತ ಮಂಡಳಿಗೆ ಆಯ್ಕೆ: ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ ಇದರ ಆಡಳಿತ ಮಂಡಲಿಗೆ ಮುಂದಿನ 2026-2031ರ ಐದು ವರ್ಷಗಳ ಅವಧಿಗೆ...