ರಾಜ್ಯದ 1020 ಪದವೀಧರರಿಗೆ 'ಯತಿಕಾರ್ಪ್ ಇಂಡಿಯಾ'ದಿಂದ ಉದ್ಯೋಗಾವಕಾಶದ ಬಗ್ಗೆ ಪ್ರಕಟಣೆ

ಬೆಂಗಳೂರು, ಮೇ 14, 2025 

ಯತಿಕಾರ್ಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. 2014-15 ರಲ್ಲಿ ಕಂಪ್ಯೂಟರ್ ಸೇವಾ ಸಂಸ್ಥೆಯಾಗಿ ಪ್ರಾರಂಭವಾದ ಯತಿಕಾರ್ಪ್, 2019 ರಲ್ಲಿ ಕಾರ್ಪೋರೇಟ್ ಜಗತ್ತಿಗೆ ಕಾಲಿಟ್ಟಿತು. ಸರ್ಕಾರಿ ಸಂಸ್ಥೆಗಳು, ಬಹುರಾಷ್ಟ್ರೀಯ ಕಂಪನಿಗಳು, ಭಾರತೀಯ ನೌಕಾಪಡೆ, ಕೈಗಾ ಅಣುಸ್ಥಾವರ ದಂತಹ ಪ್ರತಿಷ್ಠಿತ ಕಾರ್ಯಕ್ಷೇತ್ರಗಳಲ್ಲಿ ತಂತ್ರಜ್ಞಾನ ಸೇವೆಗಳನ್ನು ಒದಗಿಸುವ ಮೂಲಕ ಯತಿಕಾರ್ಪ್ ಗುರುತಿಸಿಕೊಂಡಿದೆ.

ಕಳೆದ ಕೆಲವು ವರ್ಷಗಳಿಂದ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಯತಿಕಾರ್ಪ್, ಇದೀಗ ಸಾಮಾನ್ಯ ಜನರಿಗೂ AI ತಂತ್ರಜ್ಞಾನದ ಪ್ರಯೋಜನಗಳನ್ನು ತಲುಪಿಸುವ ಮಹತ್ವದ ಹೆಜ್ಜೆಯನ್ನಿಟ್ಟಿದೆ.

ವಿದ್ಯಾರ್ಥಿಗಳು, ಶಿಕ್ಷಕರು, ಉದ್ಯಮಿಗಳು ಸೇರಿದಂತೆ 32 ವಿವಿಧ ಕ್ಷೇತ್ರಗಳಲ್ಲಿ AI ತಂತ್ರಜ್ಞಾನವನ್ನು ಪರಿಚಯಿಸುವ ಮೂಲಕ, ತಂತ್ರಜ್ಞಾನದ ಸಾರ್ವತ್ರೀಕರಣಕ್ಕೆ ಸಂಸ್ಥೆಯು ಮಹತ್ವದ ಕೊಡುಗೆ ನೀಡುತ್ತಿದೆ. ಆಧುನಿಕ ಯುಗದಲ್ಲಿ AI ತಂತ್ರಜ್ಞಾನವು ಸಮಾಜದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದು ಜನರಿಗೆ ಮಾಹಿತಿ ಸಂಗ್ರಹಿಸಲು, ಕೌಶಲ್ಯಗಳನ್ನು ಮೇಲ್ಮಟ್ಟಕ್ಕೆ ತರಲು ಮತ್ತು ನವೀನತೆಯನ್ನು ಸಮರ್ಥವಾಗಿ ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಶಿಕ್ಷಣ, ಉದ್ಯೋಗ, ಉದ್ಯಮವಕಾಶಗಳ ಸೃಷ್ಟಿ, ಕಾರ್ಯಕ್ರಮತೆಯ ವೃದ್ಧಿ, ಸಾಮಾಜಿಕ ಸಮಸ್ಯೆಗಳ ಪರಿಹಾರ ಮತ್ತು ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ AI ಪ್ರಮುಖ ಪಾತ್ರ ವಹಿಸುತ್ತದೆ.

ಪ್ರತಿಯೊಬ್ಬರೂ ಈ ತಂತ್ರಜ್ಞಾನದ ಪ್ರಯೋಜನಗಳನ್ನು ಅರಿತು, ಅದರ ಬಳಕೆ ಮತ್ತು ಪ್ರಸಾರದಲ್ಲಿ ಜವಾಬ್ದಾರಿಯುತ ಪಾತ್ರ ವಹಿಸಬೇಕಾಗಿದೆ. ಈ ಮೂಲಕ ನಾವು ಸಮಾಜದಲ್ಲಿ ತಂತ್ರಜ್ಞಾನದ ಮೂಲಕ ನಡೆಯುವ ಮೋಸ, ವಂಚನೆಗಳಿಂದ ದೂರವಿರಬಹುದು. AI ತಂತ್ರಜ್ಞಾನದ ಜ್ಞಾನ ಮತ್ತು ಬಳಕೆಯು ಕೆಲವೇ ಜನರ ಸ್ವತ್ತಾಗಿರದೇ, ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಈ ಮೂಲಕ, ಸಮಾಜದ ಎಲ್ಲಾ ವರ್ಗದ ಜನರೂ ತಂತ್ರಜ್ಞಾನದ ಪ್ರಯೋಜನಗಳನ್ನು ಪಡೆದುಕೊಂಡು, ತಮ್ಮ ಜೀವನಮಟ್ಟವನ್ನು ಸುಧಾರಿಸಲು ಸಾಧ್ಯವಾಗುತ್ತದೆ.

ಬಹುಪಯೋಗಿ ಎಐ ಕಾರ್ಡ್

ಎಐ ಕಾರ್ಡ್ ಸಂಬಂದಿಸಿ ಯತಿಕಾರ್ಪ್ ಸಂಸ್ಥೆಯ ಸಂಶೋಧನಾ ವಿಭಾಗ ಕಳೆದ ಎರಡು ವರ್ಷದಿಂದ ನಿರಂತರ ಸಂಶೋಧನೆ ನಡೆಸಿತ್ತು. ಈಗ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಕಾರ್ಡ್ ಪ್ರಾಯೋಗಿಕ ನೆಲೆಯಲ್ಲಿ ಯಶಸ್ವಿ ಕಂಡಿದೆ.

ಆರ್ಟಿಪಿಶಿಯಲ್ ಇಂಟೆಲಿಜೆನ್ಸಿ (ಎಐ) ಸದ್ಯ ವಿಶ್ವದೆಲ್ಲೆಡೆ ಜನಪ್ರಿಯದೊಂದಿಗೆ ಅನಿವಾರ್ಯವಾಗುತ್ತಿದೆ. ಇದು ಬದುಕಿನ ಅನಿವಾರ್ಯ ಅಂಗವಾಗಲಿದೆ. ಪರಿಣಾಮಕಾರಿಯಾಗಿ ಎಐ ಬಳಕೆ ನಮ್ಮ ಮುಂದಿರುವ ಸವಾಲು. ಭವಿಷ್ಯದಲ್ಲಿ ಎಐ ಎನ್ನುವುದಕ್ಕಿಂತ ಭವಿಷ್ಯವೇ ಎಐ ಎಂಬ ಮಟ್ಟಿಗೆ ಬೆಳೆದಿದೆ. ಎಲ್ಲರಿಗೂ ಪರಿಹಾರ ನೀಡುವ ವೇದಿಕೆಯಾಗಿ ಮಾರ್ಪಟ್ಟಿದೆ. ಎಐ ಅಳವಡಿಸಿಕೊಳ್ಳುವುದರಿಂದ ನಮ್ಮ ವೃತ್ತಿ, ಪ್ರವೃತ್ತಿಯಲ್ಲಿ ಕೌಶಲ್ಯ ಹೆಚ್ಚಿಸಿಕೊಳ್ಳುವುದರೊಂದಿಗೆ ನಮ್ಮ ಭವಿಷ್ಯವನ್ನೂ ನಿರ್ಧರಿಸಲಿದೆ.

ವ್ಯವಹಾರಗಳನ್ನು ಸಬಲೀಕರಣಗೊಳಿಸುವುದು
ನಾಡಿನ ಶ್ರೇಷ್ಠ ಎಐ ವಿಜ್ಞಾನಿ ಅಮೆರಿಕಾದ ಪ್ರೊ.ಎಸ್.ಎಸ್. ಐಯ್ಯಂಗಾರ್ ಅವರ ಮಾರ್ಗದರ್ಶನದಲ್ಲಿ ಈ ಎಐ ಕಾರ್ಡ್ ಅಭಿವೃದ್ಧಿ ಪಡಿಸಲಾಗಿದೆ. ಪ್ರಾಯೋಗಿಕ ನೆಲೆಯಲ್ಲಿ ಅಭಿವೃದ್ಧಿಪಡಿಸಿದ ಈ ಕಾರ್ಡ್ ಪ್ರಸ್ತುತ ನಾನಾ ಕ್ಷೇತ್ರದ ೬ಸಾವಿರಕ್ಕೂ ಅದಿಕ ಮಂದಿ ಉಪಯೋಗಿಸಿ, ಇದರ ಪ್ರಯೋಜನ ಪಡೆಯುತ್ತಿದ್ದಾರೆ.

ಎಐ ಕ್ಷೇತ್ರದಲ್ಲಿ ಬರುತ್ತಿರುವ ಹೊಸಹೊಸ ತಂತ್ರಜ್ಞಾನ, ಅವುಗಳನ್ನು ಪರಿಣಾಮಕಾರಿಯಾಗಿ ಅಳವಡಿಕೆ ಕುರಿತ ಮಾಹಿತಿಯುಳ್ಳ ವೇದಿಕೆ ಎಐ ಕಾರ್ಡ್, ಎಐ ಕ್ಷೇತ್ರ, ಎಐ ಕ್ಷೇತ್ರದ ಬೆಳವಣಿಗೆ, ಅವುಗಳ ಬಳಕೆಯ ಕುರಿತು

ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ಸರಳಭಾಷೆಯಲ್ಲಿ ಪರಿಣಿತರು ತರಬೇತಿ ನೀಡುತಿದ್ದಾರೆ. ವಿದ್ಯಾರ್ಥಿಗಳಿಂದ ಹಿಡಿದು ಕೃಷಿ, ಉದ್ಯಮ, ವಕೀಲ,ಡಾಕ್ಟರ್ ಹೀಗೆ ಒಟ್ಟು 29 ಕ್ಷೇತ್ರಗಳಿಗೆ ಈ ಕಾರ್ಡ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ.

1020 ಉದ್ಯೋಗಾವಕಾಶ & ಅರ್ಹತೆ :

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಅನ್ನು ರಾಜ್ಯದ ಎಲ್ಲಾ ವರ್ಗದ ಜನರಿಗೆ ಪರಿಚಯಿಸುವ ಅತೀ ದೊಡ್ಡ ಯೋಜನೆಯ ಪ್ರಥಮ ಹಂತದಲ್ಲಿ ಕರ್ನಾಟಕದಾದ್ಯಂತ ತಾಲೂಕು ಮಟ್ಟದಲ್ಲಿ ಒಂದು ಡೀಲರ್ಶಿಪ್ ಕೊಡುವಮೂಲಕ AI ಉದ್ಯಮಕ್ಕೆ ಜನಸಾಮಾನ್ಯರಿಗೂ ಅವಕಾಶ ಕೊಟ್ಟಿದೆ, ಇದರಮುಂದುವರಿದ ಭಾಗವಾಗಿ ಪ್ರತೀ ತಾಲೂಕಿನಲ್ಲಿಯೂ ಆಯ್ದ ಅಭ್ಯರ್ಥಿಗಳಿಗೆ Al Regional Representative ಆಗಿ ಉದ್ಯೋಗ ಪಡೆಯಲು ಅವಕಾಶವಿದೆ. ಅಭ್ಯರ್ಥಿಯು ಪದವೀಧರರಾಗಿರಬೇಕು, ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸಂವಹನ ಕೌಶಲ್ಯ ವನ್ನು ಹೊಂದಿರಬೇಕು, ಪ್ರತಿ ತಾಲೂಕಿನಿಂದ ಕ್ರಮವಾಗಿ ನಾಲ್ವರನ್ನು ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಹಾಗೂ ಒಟ್ಟು ರಾಜ್ಯದಾದ್ಯಂತ 1020 ಮಂದಿಗೆ ಉದ್ಯೋಗಾವಕಾಶ ಈ ಯೋಜನೆಯಿಂದಾಗಲಿದೆ.

ಆಕರ್ಷಕ ವೇತನ:

ಉದ್ಯೋಗಕಾಂಕಿಗಳು ತಿಂಗಳಿಗೆ ರೂ. 25,000 ರಿಂದ ರೂ. 30,000 ಸಾವಿರ ವರೆಗಿನ ವೇತನವನ್ನು ಅಭ್ಯರ್ಥಿಗಳ ಕಾರ್ಯಕ್ರಮತೆಗೆ ಅನುಗುಣವಾಗಿ ಪಡೆಯಬಹುದಾಗಿದೆ. ನೇಮಕವಾದ ಎಲ್ಲ ಸಿಬ್ಬಂದಿಗಳಿಗೆ ಕಂಪನಿಯು ಕಾನೂನು ಬದ್ಧ ಸೌಲಭ್ಯವನ್ನು ನೀಡಲಿದೆ.

ಅಭ್ಯರ್ಥಿಗಳಿಗೆ ತಮ್ಮ ತಾಲೂಕಿನಿಂದಲೇ ಕೆಲಸ ಮಾಡಲು ಅವಕಾಶ, ಮೊದಲ 6 ತಿಂಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನ ಬಗ್ಗೆ ಜಾಗೃತಿ ಮೂಡಿಸಲು ಆಯ್ಕೆಯಾದ ಅಭ್ಯರ್ಥಿಗಳು ಫೀಲ್ಡ್ ನಲ್ಲಿದ್ದು ಕಾರ್ಯ ನಿರ್ವಹಿಸಲು ಸಿದ್ಧವಿರಬೇಕು. 6 ತಿಂಗಳು ಫೀಲ್ಡ್ ನಲ್ಲಿ ಅನುಭವ ಪಡೆದುಕೊಂಡ ಬಳಿಕ ಅವರನ್ನು ಸಂಸ್ಥೆಯ ಖಾಯಂ ಉದ್ಯೋಗಿಯಾಗಿ ಕಚೇರಿಗೆ ನೇಮಿಸಲಾಗುತ್ತದೆ. ಅಭ್ಯರ್ಥಿಗಳ ಅಯ್ಕೆ ಪ್ರಕ್ರಿಯೆಯು 2 ಹಂತದಲ್ಲಿದ್ದು ಪ್ರಥಮವಾಗಿ ಅನ್ಸೆನ್ ಮೂಲಕ ಆಯ್ಕೆಮಾಡಲಾಗುತ್ತದೆ.

Comments

Popular posts from this blog

ಕೆ.ಎಸ್.ಆರ್.ಟಿ.ಸಿ. ನಿಗಮಕ್ಕೆ ಹೊಸದಾಗಿ ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾಗಿದ್ದರೂ ಕಾರ್ಯ ನಿಯೋಜನೆ ಮಾಡುತ್ತಿಲ್ಲ ಎಂದು ನೌಕರರ ಅಸಮಾಧಾನ

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಶಿವಮೊಗ್ಗದ ಸರ್ಜಿ ಕನ್ವೆನ್ಸನ್ ಹಾಲ್ ನಲ್ಲಿ ಸೆಪ್ಟೆಂಬರ್ 20ರಂದು ವೈದ್ಯೋಧ್ಯಮಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಚಿಂತಕರ ಸಮಾವೇಶ ನಡೆಯಲಿದೆ.