ರಾಜರಾಜೇಶ್ವರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ "ಕಲಾಸೌರಭ -2K25" ವಾರ್ಷಿಕ ಕ್ರೀಡಾ - ಸಾಂಸ್ಕೃತಿಕ ಸಮಾರಂಭವನ್ನು ನಟ ವಸಿಷ್ಠ ಸಿಂಹ ಅವರು ಉದ್ಘಾಟಿಸಿದರು.


ಬೆಂಗಳೂರು ಮೇ 9, 2025

ಬೆಂಗಳೂರಿನ ರಾಜರಾಜೇಶ್ವರಿ ಇಂಜಿನಿಯರಿಂಗ್ ಕಾಲೇಜಿನ ಎ.ಸಿ.ಎಸ್ ಸಭಾಂಗಣದಲ್ಲಿ "ಕಲಾಸೌರಭ -2K25" ವಾರ್ಷಿಕ ಕ್ರೀಡಾ - ಸಾಂಸ್ಕೃತಿಕ ಸಮಾರಂಭ ನಡೆಯಿತು. 

  ರಾಜರಾಜೇಶ್ವರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ "ಕಲಾಸೌರಭ -2K25" ವಾರ್ಷಿಕ ಕ್ರೀಡಾ - ಸಾಂಸ್ಕೃತಿಕ ಸಮಾರಂಭವನ್ನು ನಟ ವಸಿಷ್ಠ ಸಿಂಹ ಅವರು ಉದ್ಘಾಟಿಸಿದರು. 

 ಈ ಸಮಾರಂಭದಲ್ಲಿ ರಾಜರಾಜೇಶ್ವರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಆರ್. ಬಾಲಕೃಷ್ಣ ಅವರು ಮಾತನಾಡಿದರು. ಪ್ರತಿವರ್ಷದಂತೆ ಈ ವರ್ಷವೂ "ಕಲಾಸೌರಭ -2K25" ಸಮಾರಂಭ ಹಮ್ಮಿಕೊಂಡಿದ್ದೇವೆ. ಈ ಬಾರಿ ನಟ ವಸಿಷ್ಠ ಸಿಂಹ ಅವರು ಪ್ರಮುಖ ಅತಿಥಿಯಾಗಿ ಭಾಗಿಯಾಗಿದ್ದಾರೆ ಎಂದು ಆರ್. ಬಾಲಕೃಷ್ಣ ಅವರು ಹೇಳಿದರು. 

 ಈ ಸಮಾರಂಭದಲ್ಲಿ ನಟ ವಸಿಷ್ಠ ಸಿಂಹ ಅವರು ಮಾತನಾಡಿದರು. ರಾಜರಾಜೇಶ್ವರಿ ಕಾಲೇಜಿನ ಸುತ್ತಮುತ್ತ ಅನೇಕ ಬಾರಿ ಓಡಾಡಿದ್ದೇನೆ. ಈ ಬಾರಿ "ಕಲಾಸೌರಭ -2K25" ಸಮಾರಂಭ" ಕ್ಕೆ ಬಂದಿರುವುದು ಖುಷಿ ತಂದಿದೆ ಎಂದು ವಸಿಷ್ಠ ಸಿಂಹ ಅವರು ಹೇಳಿದರು. ವಿದ್ಯಾರ್ಥಿಗಳು ಗಮನವಿಟ್ಟು ವಿದ್ಯಾಭ್ಯಾಸದಲ್ಲಿ ತೊಡಗಬೇಕು. ಆದರೆ 'ಓದುವಾಗ ಆಟ ಆಡಬಾರದು, ಆಟ ಆಡುವಾಗ ಓದಬಾರದು ಎಂದು ವಸಿಷ್ಠ ಸಿಂಹ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ವಸಿಷ್ಠ ಸಿಂಹ ಅವರು ಪ್ರಶಸ್ತಿ ಫಲಕ ನೀಡಿದರು.

Comments

Popular posts from this blog

ಕೆ.ಎಸ್.ಆರ್.ಟಿ.ಸಿ. ನಿಗಮಕ್ಕೆ ಹೊಸದಾಗಿ ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾಗಿದ್ದರೂ ಕಾರ್ಯ ನಿಯೋಜನೆ ಮಾಡುತ್ತಿಲ್ಲ ಎಂದು ನೌಕರರ ಅಸಮಾಧಾನ

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಶಿವಮೊಗ್ಗದ ಸರ್ಜಿ ಕನ್ವೆನ್ಸನ್ ಹಾಲ್ ನಲ್ಲಿ ಸೆಪ್ಟೆಂಬರ್ 20ರಂದು ವೈದ್ಯೋಧ್ಯಮಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಚಿಂತಕರ ಸಮಾವೇಶ ನಡೆಯಲಿದೆ.