ರಾಜರಾಜೇಶ್ವರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ "ಕಲಾಸೌರಭ -2K25" ವಾರ್ಷಿಕ ಕ್ರೀಡಾ - ಸಾಂಸ್ಕೃತಿಕ ಸಮಾರಂಭವನ್ನು ನಟ ವಸಿಷ್ಠ ಸಿಂಹ ಅವರು ಉದ್ಘಾಟಿಸಿದರು.
ಬೆಂಗಳೂರಿನ ರಾಜರಾಜೇಶ್ವರಿ ಇಂಜಿನಿಯರಿಂಗ್ ಕಾಲೇಜಿನ ಎ.ಸಿ.ಎಸ್ ಸಭಾಂಗಣದಲ್ಲಿ "ಕಲಾಸೌರಭ -2K25" ವಾರ್ಷಿಕ ಕ್ರೀಡಾ - ಸಾಂಸ್ಕೃತಿಕ ಸಮಾರಂಭ ನಡೆಯಿತು.
ರಾಜರಾಜೇಶ್ವರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ "ಕಲಾಸೌರಭ -2K25" ವಾರ್ಷಿಕ ಕ್ರೀಡಾ - ಸಾಂಸ್ಕೃತಿಕ ಸಮಾರಂಭವನ್ನು ನಟ ವಸಿಷ್ಠ ಸಿಂಹ ಅವರು ಉದ್ಘಾಟಿಸಿದರು.
ಈ ಸಮಾರಂಭದಲ್ಲಿ ರಾಜರಾಜೇಶ್ವರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಆರ್. ಬಾಲಕೃಷ್ಣ ಅವರು ಮಾತನಾಡಿದರು. ಪ್ರತಿವರ್ಷದಂತೆ ಈ ವರ್ಷವೂ "ಕಲಾಸೌರಭ -2K25" ಸಮಾರಂಭ ಹಮ್ಮಿಕೊಂಡಿದ್ದೇವೆ. ಈ ಬಾರಿ ನಟ ವಸಿಷ್ಠ ಸಿಂಹ ಅವರು ಪ್ರಮುಖ ಅತಿಥಿಯಾಗಿ ಭಾಗಿಯಾಗಿದ್ದಾರೆ ಎಂದು ಆರ್. ಬಾಲಕೃಷ್ಣ ಅವರು ಹೇಳಿದರು.
ಈ ಸಮಾರಂಭದಲ್ಲಿ ನಟ ವಸಿಷ್ಠ ಸಿಂಹ ಅವರು ಮಾತನಾಡಿದರು. ರಾಜರಾಜೇಶ್ವರಿ ಕಾಲೇಜಿನ ಸುತ್ತಮುತ್ತ ಅನೇಕ ಬಾರಿ ಓಡಾಡಿದ್ದೇನೆ. ಈ ಬಾರಿ "ಕಲಾಸೌರಭ -2K25" ಸಮಾರಂಭ" ಕ್ಕೆ ಬಂದಿರುವುದು ಖುಷಿ ತಂದಿದೆ ಎಂದು ವಸಿಷ್ಠ ಸಿಂಹ ಅವರು ಹೇಳಿದರು. ವಿದ್ಯಾರ್ಥಿಗಳು ಗಮನವಿಟ್ಟು ವಿದ್ಯಾಭ್ಯಾಸದಲ್ಲಿ ತೊಡಗಬೇಕು. ಆದರೆ 'ಓದುವಾಗ ಆಟ ಆಡಬಾರದು, ಆಟ ಆಡುವಾಗ ಓದಬಾರದು ಎಂದು ವಸಿಷ್ಠ ಸಿಂಹ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ವಸಿಷ್ಠ ಸಿಂಹ ಅವರು ಪ್ರಶಸ್ತಿ ಫಲಕ ನೀಡಿದರು.
Comments
Post a Comment