'ಭಾರತೀಯ ಸರ್ವ ಸಂಘಟನೆಗಳ ಸಮಾನತೆ ಒಕ್ಕೂಟ'ದ ಅಧ್ಯಕ್ಷರಾಗಿ ಎಂ. ರಾಮಚಂದ್ರಪ್ಪ (ಹೂಡಿ ಚಿನ್ನಿ) ಆಯ್ಕೆ

ಬೆಂಗಳೂರು, ಮೇ 4, 2025

'ಭಾರತೀಯ ಸರ್ವ ಸಂಘಟನೆಗಳ ಸಮಾನತೆ ಒಕ್ಕೂಟ'ದ ಅಧ್ಯಕ್ಷರಾಗಿ ಎಂ. ರಾಮಚಂದ್ರಪ್ಪ (ಹೂಡಿ ಚಿನ್ನಿ) ಆಯ್ಕೆ

ಬೆಂಗಳೂರಿನ ಹೂಡಿ ವಲಯದ ಭಗಿನಿ ರೆಸಿಡೆನ್ಸಿ ಹೋಟೆಲ್ ನಲ್ಲಿ "ಭಾರತೀಯ ಸರ್ವ ಸಂಘಟನೆಗಳ ಸಮಾನತೆ ಒಕ್ಕೂಟ'ದ ಪೂರ್ವಭಾವಿ ಸಭೆ ನಡೆಯಿತು. 

 ಈ ಸಭೆಯು ಹೂಡಿ ಪ್ರದೇಶದ ಪ್ರಮುಖ ಮುಖಂಡರಾದ ಎಂ. ರಾಮಚಂದ್ರಪ್ಪ (ಹೂಡಿ ಚಿನ್ನಿ) ಅವರ ನೇತೃತ್ವದಲ್ಲಿ ನಡೆಯಿತು. 
 
  ಈ ಮಹತ್ವದ ಸಭೆಯಲ್ಲಿ 85 ಕ್ಕೂ ಹೆಚ್ಚು ಸಂಘಟನೆಗಳ ರಾಜ್ಯಾಧ್ಯಕ್ಷರು ಭಾಗಿಯಾಗಿದ್ದರು. ಕನ್ನಡಪರ ಹಾಗೂ ದಲಿತ ಸಂಘಟನೆಗಳ ಪ್ರಮುಖರು ಭಾಗಿಯಾಗಿದ್ದರು. 

ರಾಜ್ಯದ ನೆಲ, ಜಲ, ಭಾಷೆ, ಸಂಸ್ಕೃತಿ ರಕ್ಷಣೆಗೆ 'ಭಾರತೀಯ ಸರ್ವ ಸಂಘಟನೆಗಳ ಸಮಾನತೆ ಒಕ್ಕೂಟ'ದ ಸದಸ್ಯರು ಶ್ರಮಿಸಬೇಕೆಂದು ಹೂಡಿ ಚಿನ್ನಿ ಅವರು ಮನವಿ ಮಾಡಿದರು. 

ಬಡವರು ಹಾಗೂ ಮದ್ಯಮ ವರ್ಗದ ಜನರ ಅನೇಕ ಸಮಸ್ಯೆಗಳನ್ನು ಒಗ್ಗಟ್ಟಿನಿಂದ ಪ್ರಾಮಾಣಿಕ ವಾಗಿ ಬಗೆಹರಿಸಲು ಶ್ರಮಿಸುತ್ತೇವೆ ಎಂದು ಹೂಡಿ ಚಿನ್ನಿ ಅವರು ಹೇಳಿದರು.

Comments

Popular posts from this blog

ಕೆ.ಎಸ್.ಆರ್.ಟಿ.ಸಿ. ನಿಗಮಕ್ಕೆ ಹೊಸದಾಗಿ ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾಗಿದ್ದರೂ ಕಾರ್ಯ ನಿಯೋಜನೆ ಮಾಡುತ್ತಿಲ್ಲ ಎಂದು ನೌಕರರ ಅಸಮಾಧಾನ

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಶಿವಮೊಗ್ಗದ ಸರ್ಜಿ ಕನ್ವೆನ್ಸನ್ ಹಾಲ್ ನಲ್ಲಿ ಸೆಪ್ಟೆಂಬರ್ 20ರಂದು ವೈದ್ಯೋಧ್ಯಮಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಚಿಂತಕರ ಸಮಾವೇಶ ನಡೆಯಲಿದೆ.