ಗಂಭೀರ ಭ್ರಷ್ಟಾಚಾರ ಆರೋಪಗಳ ಸಂಬಂಧ ಚುನಾವಣೆ ಮುಂದೂಡಿಕೆಗೆ ಹಾಗೂ ಹಿಂದಿನ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಕೆಲ ಸದಸ್ಯರ ವಜಾ ಮಾಡಬೇಕೆಂದು ಕರ್ನಾಟಕ ರಾಜ್ಯ ಗಂಗಾ ಮತಸ್ಥರ ಸಂಘ'ದ ಸದಸ್ಯರು ಆಗ್ರಹಿಸಿದರು.

ಬೆಂಗಳೂರು, ಜೂನ್ 21, 2025

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕರ್ನಾಟಕ ರಾಜ್ಯ ಗಂಗಾ ಮತಸ್ಥರ ಸಂಘ'ದ ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ಗಂಭೀರ ಭ್ರಷ್ಟಾಚಾರ ಆರೋಪಗಳ ಸಂಬಂಧ ಚುನಾವಣೆ ಮುಂದೂಡಿಕೆಗೆ ಹಾಗೂ ಹಿಂದಿನ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಕೆಲ ಸದಸ್ಯರ ವಜಾ ಮಾಡಬೇಕೆಂದು ಕರ್ನಾಟಕ ರಾಜ್ಯ ಗಂಗಾ ಮತಸ್ಥರ ಸಂಘ'ದ ಸದಸ್ಯರು ಆಗ್ರಹಿಸಿದರು. 

ಕರ್ನಾಟಕ ರಾಜ್ಯ ಗಂಗಾ ಮತಸ್ಥರ ಸಂಘದ ಸದಸ್ಯರು ಸಂಘದ ಹಿಂದಿನ ಆಡಳಿತ ಮಂಡಳಿಯ ವಿರುದ್ಧ ಲಘುಮಾನವಾಗಿ ವರ್ತನೆಯಾದ ಭ್ರಷ್ಟಾಚಾರ, ಧನಕಿಯುಕ್ತತೆ ಹಾಗೂ ಲೆಕ್ಕಪತ್ರ ಕೃತಕ ವೇಷದ ಕುರಿತು ಸ್ಪಷ್ಟ ದಾಖಲೆಗಳಿದ್ದರೂ ಸಹ ಸಹಕಾರ ಸಂಘಗಳ ರಿಜಿಸ್ಟ್ರಾರ್ ಕಚೇರಿಯಿಂದ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂಬುದು "ಸಂಘದ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ.

ಸಂಘದ ಅವ್ಯವಸ್ಥಿತ ಆಡಳಿತದ ಹಿನ್ನಲೆಯಲ್ಲಿ ನೇಮಕಗೊಂಡ ಆಡಳಿತಾಧಿಕಾರಿ ಶ್ರೀಮತಿ ವಿದ್ಯಾರಾಣಿಯವರ ೨೮ ವರದಿಯಂತೆ ಸಂಘದಲ್ಲಿ ಕೋಟ್ಯಾಂತರ ರೂಪಾಯಿಗಳ ಅನಿಯಮಿತ ಖರ್ಚು, ಲೆಕ್ಕಪತ್ರಗಳಲ್ಲಿ ಕೃತಕತೆ ಹಾಗೂ ೧ ರ ವೈವಸಿತವಾಗದ ಆಡಳಿತ ನಡೆದಿದೆ ಎಂಬುದು ಸ್ಪಷ್ಟವಾಗಿದೆ. ಮಳಿಗೆಗಳ ಠೇವಣಿ ಮತ್ತು ಬಾಡಿಗೆ ಹಣ απ. 52,50,000/- 1,61,61,837/-๔๑.54,37,450/- ๒๕๐๐ ๒๐๕๘ ๒๕๔๖ ๘๑-0,42,450/- 2 a 2,4,5,987/- 2 ಸರ್ಕಾರದಿಂದ ಬಂದಂತಹ ಅನುದಾನದ ಹಣ ರೂ.2,12,50,000/- ಹಣವನ್ನು ಸರ್ಕಾರ ಹಾಗೂ ಸಂಘದ ನೀತಿ ನಿಯಮಗಳನ್ನು ಪಾಲಿಸದೆ ದುರುಪಯೋಗ ಮಾಡಿಕೊಂಡಿರುತ್ತಾರೆ. ಇದರ ಕುರಿತು ಅಧಿಕಾರಿಗಳಿಂದ ವರದಿ ಸಾಭೀತಾದರೂ ಮತ್ತು ಹಲವು ತಿಂಗಳಿಂದ ಸದಸ್ಯರು ದೂರು ನೀಡಿದರೂ ಸಹ, ರಿಜಿಸ್ಟ್ರಾರ್ ಕಚೇರಿ ಅಥವಾ ಉಪರಿಜಿಸ್ಟ್ರಾರ್ ಕಚೇರಿಯಿಂದ ಯಾವುದೇ ಶಿಸ್ತು ಕ್ರಮ ಕೈಗೊಳ್ಳಲಾಗಿಲ್ಲ ಹಾಗೂ ನಷ್ಟದ ಹಣದ ಪೂರಣಕ್ಕಾಗಿ ಯಾವುದೇ ಕ್ರಮವನ್ನು ಕೈಗೊಳ್ಳಲಾಗಿಲ್ಲ.

ಹಿಂದಿನ ಆಡಳಿತ ಮಂಡಳಿಯವರು ಸಂಘದ ವಿಧಾನಾನುಸಾರ ವಾರ್ಷಿಕ ಸಾಮಾನ್ಯ ಸಭೆಯನ್ನು ನಡೆಸದೇ ಸಂಘದ ಸದಸ್ಯರ ಹಕ್ಕುಗಳನ್ನು ನಿರ್ಲಕ್ಷಿಸಿದ್ದಾರೆ. ಇದು ಮಹತ್ವದ ಅಕ್ರಮ ಮತ್ತು ವಿಧಾನ ಉಲ್ಲಂಘನೆಯ ನಿದರ್ಶನವಾಗಿದೆ.

1

ದಾನಿಗಳು ಕೊಟ್ಟ ಕೋಟ್ಯಾಂತರ ದೇಣಿಗೆಯ ವಿವರ ಮರೆಮಾಚಿದ್ದಾರೆ. ಸೆಕ್ಷನ್ 29 ರ ಪ್ರಕಾರ ಕೋಟೆಗಟ್ಟಲೆ ಬಂದಿರುವ ಸದಸ್ಯತ್ತದ ಹಣವನ್ನು ರಿಸರ್ವ್ ಮಾಡಬೇಕಿತ್ತು, ಅದನ್ನು ಇವರು ದುರುಪಯೋಗ ಮಾಡಿಕೊಂಡಿರುವುದ ಸಾಭೀತಾಗಿದೆ. 5 ವರ್ಷದಿಂದ ಯಾರಿಗೂ ಸಹ ಟಿಎ, ಡಿಎ ಕೊಟ್ಟಿರುವುದಿಲ್ಲ, ಅದನ್ನು ಲಪಟಾಯಿಸಿದ್ದಾರೆ. ಸಂಘಕ್ಕೆ ತಂದ ಪೀಠೋಪಕರಣಗಳಾದ ಹಾಸಿಗೆ, ಮಂಚ, ಇನ್ನಿತರೆ ಎಲ್ಲಾ ವಸ್ತುಗಳು ಕಳಪೆ ಮಟ್ಟದಾಗಿರುತ್ತವೆ. ಇದರ ಕುರಿತಾಗಿ ರೂ.10 ಲಕ್ಷ ಹಣವನ್ನು ಅಧ್ಯಕ್ಷರು ದುರುಪಯೋಗಮಾಡಿಕೊಂಡಿರುತ್ತಾರೆ. ಸಂಘದ ಸದಸ್ಯರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ತಿಳಿಸಿ ಉಪಾಧ್ಯಕ್ಷರು ನಾಗರಾಜ್ ಮಣ್ಣೂರು ರೂ.4 ಲಕ್ಷ ಹಣವನ್ನು ವಿತ್‌ ಡ್ರಾ ಮಾಡಿಕೊಂಡು ಸದಸ್ಯರಿಗೆ ವಂಚಿಸಿರುತ್ತಾರೆ. ಇದೇ ರೀತಿ ಹತ್ತಾರು ಬಾರಿ ಹಣದ ದುರುಪಯೋಗವಾಗಿರುತ್ತದೆ. ಅವರನ್ನು ಸಂಘದ ಸದಸ್ಯತ್ವದಿಂದ ವಜಾಗೊಳಿಸದೆ. ಇವರ ವಿರುದ್ಧ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳದೆ ಉಪ ವಿಬಂಧಕರು ಚುನಾವಣೆ ನಡೆಸಲು ಮುಂದಾಗಿರುವುದು ಅವರ ಜೊತೆ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಇದೇ ಸಮಯದಲ್ಲಿ ರಿಟರ್ನಿಂಗ್ ಅಧಿಕಾರಿ ಮುಂದಿನ ಚುನಾವಣೆ ದಿನಾಂಕಗಳನ್ನು ಪ್ರಕಟಿಸಿರುವುದು ತೀವ್ರ ವಿರೋಧಕ್ಕೆ ಕಾರಣವಾಗಿದೆ.

ಭ್ರಷ್ಟಾಚಾರ ಮತ್ತು ಅನಿಯಮಿತತನದಲ್ಲಿ ಸಾಭೀತಾದವರ ವಿರುದ್ಧ ಯಾವುದೇ ಕ್ರಮವಿಲ್ಲದಿದ್ದರೆ ಅವರಿಗೆ ಬೇಕಾದ ರೀತಿಯಲ್ಲಿ ಕುತಂತ್ರದಿಂದ ಬೈಲಾ ತಿದ್ದುಪಡಿ ಮಾಡಿಕೊಂಡು ಅವರಿಗೆ ಬೇಡವಾದ ಸಾವಿರಾರು ಅಜೀವ ಸದಸ್ಯರ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟ ಕಾರಣ ಅವರೇ ಪುನ: ಚುನಾವಣೆಯಲ್ಲಿ ಸ್ಪರ್ಧಿಸಿ ದುರ್ಮಾಗದಿಂದ ಅಧಿಕಾರಕ್ಕೆ ಬರುವ ಅಪಾಯವಿದೆ. ಇದು ಸಾರ್ಥಕ ಚುನಾವಣಾ ಪ್ರಕ್ರಿಯೆಯ ವಿರುದ್ಧ ನಡೆಯುವ ಅನ್ಯಾಯವಾಗುತ್ತದೆ.

ಆದ್ದರಿಂದ, ಸಂಘದ ಸದಸ್ಯರ ಮತ್ತು ಸಮಾಜದ ಹಿತಚಿಂತಕರ ಧ್ವನಿತ ಆಗ್ರಹ:

1. ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಸೆಕ್ಷನ್ 29-C (k), (1), (3)(b) ಅಡಿಯಲ್ಲಿ ಹಿಂದಿನ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಕೆಲ ಸದಸ್ಯರನ್ನು ತಕ್ಷಣವೇ ಸಂಘದಿಂದ ವಜಾಗೊಳಿಸಬೇಕು.

ಸಿ

2. ಸದಾಚಾರದ ವಿರುದ್ಧ ತೊಡಗಿದ್ದವರನ್ನು ಸ್ಪರ್ಧೆಯಿಂದ ವಜಾಗೊಳಿಸುವ ತನಕ ಈಗಾಗಲೇ ಘೋಷಿಸಿರುವ ಚುನಾವಣೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು.

3. ಸಂಘದ ನಿಧಿ ದುರ್ಬಳಕೆಗೆ ಕಾರಣವಾದವರ ವಿರುದ್ಧ ಹಣಪೂರಣ ಕ್ರಮಗಳನ್ನು ತಕ್ಷಣ ಆರಂಭಿಸಬೇಕು.

4. ಈ ವಿಷಯವನ್ನು ನಿರ್ಲಕ್ಷಿಸಿರುವ ರಿಜಿಸ್ಟ್ರಾರ್ ಕಚೇರಿಯಿಂದ ಜವಾಬ್ದಾರಿ ಒತ್ತಿಸಬೇಕು.

ಈ ಘಟನೆ ಕೇವಲ ಒಂದು ಸಂಘದ ಸಮಸ್ಯೆಯಲ್ಲ, ಇದು ರಾಜ್ಯ ಸರ್ಕಾರದ ರಾಜ್ಯದ ಸಹಕಾರ ಸಂಸ್ಥೆಗಳ ಆಡಳಿತ ವ್ಯವಸ್ಥೆಯ ಮೇಲಿನ ನಂಬಿಕೆಗೆ ದೊಡ್ಡ ಧಕ್ಕೆಯಾಗಿದೆ.

ಕೆ 45 ಕರ್ನಾಟಕ ಸರ್ಕಾರ ಮತ್ತು ಸಹಕಾರ ಇಲಾಖೆ ಈ ವಿಷಯದಲ್ಲಿ ತಕ್ಷಣವೇ ಹಸ್ತಕ್ಷೇಪ ಮಾಡಬೇಕು ಎಂದು ಸಂಘದ ಸದಸ್ಯರು ಮತ್ತು ಸಮಾಜದ ಹಿತಚಿಂತಕರು ಒತ್ತಾಯಿಸುತ್ತಿದ್ದಾರೆ.

Comments

Popular posts from this blog

ಕೆ.ಎಸ್.ಆರ್.ಟಿ.ಸಿ. ನಿಗಮಕ್ಕೆ ಹೊಸದಾಗಿ ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾಗಿದ್ದರೂ ಕಾರ್ಯ ನಿಯೋಜನೆ ಮಾಡುತ್ತಿಲ್ಲ ಎಂದು ನೌಕರರ ಅಸಮಾಧಾನ

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಶಿವಮೊಗ್ಗದ ಸರ್ಜಿ ಕನ್ವೆನ್ಸನ್ ಹಾಲ್ ನಲ್ಲಿ ಸೆಪ್ಟೆಂಬರ್ 20ರಂದು ವೈದ್ಯೋಧ್ಯಮಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಚಿಂತಕರ ಸಮಾವೇಶ ನಡೆಯಲಿದೆ.