ಬೆಂಗಳೂರಿನ ಕೋರ್ಟ್ಯಾರ್ಡ್ ಬೈ ಮ್ಯಾರಿಯಟ್ ನಲ್ಲಿ 'ಯುವ ಪುಸ್ತಕ ಸರಣಿ' ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಬೆಂಗಳೂರು, ಜುಲೈ 12, 2025
ಬೆಂಗಳೂರಿನ ಕೋರ್ಟ್ಯಾರ್ಡ್ ಬೈ ಮ್ಯಾರಿಯಟ್ ನಲ್ಲಿ 'ಯುವ ಪುಸ್ತಕ ಸರಣಿ' ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ದೀಪ ಬೆಳಗುವ ಮುಖೇನ ಈ ಕಾರ್ಯಕ್ರಮವನ್ನು ಸಂಸದರಾದ ಸುಧಾ ಮೂರ್ತಿ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮಧುಸೂದನ್ ಸಾಯಿ ಅವರು ಉದ್ಘಾಟನೆ ಮಾಡಿದರು.
ಫೌಂಡೇಷನ್ ಫಾರ್ ಇಂಡಿಯನ್ ಹಿಸ್ಟಾರಿಕಲ್ ಆ್ಯಂಡ್ ಕಲ್ಬರಲ್ ರಿಸರ್ಚ್ ಸಂಸ್ಥೆಯು 'ಯುವ ಪುಸ್ತಕ ಸರಣಿ' ಕಾರ್ಯಕ್ರಮವನ್ನು ಆಯೋಜಿಸಿತ್ತು.
ಈ ಕಾರ್ಯಕ್ರಮದಲ್ಲಿ ಪ್ರಮುಖ ಲೇಖಕರ ಪುಸ್ತಕಗಳನ್ನು ಸುಧಾ ಮೂರ್ತಿ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ದೇಶದ ಇತಿಹಾಸದ ಬಗ್ಗೆ ಬೆಳಕು ಚೆಲ್ಲುವಂತಹ ಕನ್ನಡ, ತೆಲುಗು, ತಮಿಳು ಹಾಗೂ ಭಾಷಾಂತರಗೊಂಡ ಪುಸ್ತಕಗಳನ್ನು ಬಿಡುಗಡೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಇತಿಹಾಸದ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ವಿವಿಧ ಶಾಲೆಗಳ ಮಕ್ಕಳು ಭಾಗಿಯಾಗಿದ್ದರು.
Comments
Post a Comment