ಜಿಬಿಎ ಚುನಾವಣೆ ತಯಾರಿಗೆ ರಮೇಶ್ ಗೌಡರವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ
ಈ ಸಭೆಯನ್ನು ಕೆ ಆರ್ ಪುರ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಲಕ್ಷ್ಮಣ್. ಎಲ್.ರವರು ಮತ್ತು ಮಹದೇವಪುರ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಓ ಪಿ ಓಬಳೇಶ್ ರವರು ಆಯೋಜಿಸಿದ್ದರು. ಪಕ್ಷದ ವಕ್ತಾರರಾದ ಶ್ರೀ ಎಚ್ ಎನ್ ದೇವರಾಜ್ ರವರು ಮತದಾರರ ಪರಿಷ್ಕರಣೆ ಬಗ್ಗೆ ವಿವರಣೆ ನೀಡಿದರು. ಈ ಸಂದರ್ಭದಲ್ಲಿ ಗ್ರೇಟರ್ ಬೆಂಗಳೂರು ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಶೈಲಾ ಸಂತೋಜಿ ರಾವ್ ರವರು, ಗ್ರೇಟರ್ ಬೆಂಗಳೂರು ಮಹಾಪ್ರಧಾನ ಕಾರ್ಯದರ್ಶಿ ಶ್ರೀ ಎಸ್ ರಮೇಶ ರವರು, ಬೆಂಗಳೂರು ನಗರ ಪೂರ್ವ ವಿಭಾಗದ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಮಲ್ಲೇಶ್ವರಿ ರವರು, ಕೆಆರ್ ಪುರಂ ಕ್ಷೇತ್ರದ ಬಿಎಲ್ಎ-1 ಶ್ರೀ ಜಯಶೀಲ ಕುಮಾರ್ ರವರು, ಮಹದೇವಪುರ ಕ್ಷೇತ್ರದ ಬಿಎಲ್ಎ-1 ಶ್ರೀ ಕಾಂತರಾಜುರವರು, ಗ್ರೇಟರ್ ಬೆಂಗಳೂರು ಮುಸ್ಲಿಂ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾದ ಶ್ರೀ ಅಫ್ರೋಜ್ ಬೇಗ್ ರವರು, ಸೇವಾದಳ ವಿಭಾಗದ ಅಧ್ಯಕ್ಷರಾದ ಶ್ರೀ ಪಿ ಮಹೇಶ್ ರವರು, ವಿದ್ಯಾರ್ಥಿ ವಿಭಾಗದ ಅಧ್ಯಕ್ಷರಾದ ಶ್ರೀ ಆದಿತ್ಯರವರು ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕ್ಷೇತ್ರದ ಹಲವಾರು ಕಾಂಗ್ರೆಸ್ ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
Comments
Post a Comment